<p><strong>ಯಲಬುರ್ಗಾ: </strong>ತಾಲ್ಲೂಕಿನ ಸಂಗನಾಳ ಗ್ರಾಮದ ಸಂಗಮೇಶ್ವರ ದೇವರ ಮಹಾ ರಥೋತ್ಸವ ಈಚೆಗೆ ವಿಜೃಂಭಣೆಯಿಂದ ಜರುಗಿತು.</p>.<p>ಬೆಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.</p>.<p>ಯಲಬುರ್ಗಾ, ಕುಕನೂರು, ಕಲ್ಲೂರು, ರಾಜೂರ, ಹಾಳಕೇರಿ, ಕೊಪ್ಪಳ, ಮಂಗಳೂರು ಸೇರಿ ವಿವಿಧ ಭಾಗಗಳ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.</p>.<p>ದೇವಸ್ಥಾನದ ಆವರಣದಿಂದ ಪಾದಗಟ್ಟೆವರೆಗೆ ತೆರಳಿದ ರಥಕ್ಕೆ ಭಕ್ತರು ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿಯನ್ನು ಸಮರ್ಪಿಸಿದರು.</p>.<p>ಕುಕನೂರಿನ ಮಹಾದೇವ ದೇವರು, ಗಣ್ಯರಾದ ಬಸವರಾಜ ಗಡಾದ, ನಿರ್ಮಲ ತಳವಾರ, ಸೋಮಪ್ಪ ಜೋಗಣ್ಣವರ, ಶ್ರೀಶೈಲ ತಳವಾರ, ರಾಮಣ್ಣ, ಗವಿಸಿದ್ದಯ್ಯ ಗಂಧದ, ಶೇಖರ ಗುರಾಣಿ ಇದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಯಲಬುರ್ಗಾ: </strong>ತಾಲ್ಲೂಕಿನ ಸಂಗನಾಳ ಗ್ರಾಮದ ಸಂಗಮೇಶ್ವರ ದೇವರ ಮಹಾ ರಥೋತ್ಸವ ಈಚೆಗೆ ವಿಜೃಂಭಣೆಯಿಂದ ಜರುಗಿತು.</p>.<p>ಬೆಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.</p>.<p>ಯಲಬುರ್ಗಾ, ಕುಕನೂರು, ಕಲ್ಲೂರು, ರಾಜೂರ, ಹಾಳಕೇರಿ, ಕೊಪ್ಪಳ, ಮಂಗಳೂರು ಸೇರಿ ವಿವಿಧ ಭಾಗಗಳ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.</p>.<p>ದೇವಸ್ಥಾನದ ಆವರಣದಿಂದ ಪಾದಗಟ್ಟೆವರೆಗೆ ತೆರಳಿದ ರಥಕ್ಕೆ ಭಕ್ತರು ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿಯನ್ನು ಸಮರ್ಪಿಸಿದರು.</p>.<p>ಕುಕನೂರಿನ ಮಹಾದೇವ ದೇವರು, ಗಣ್ಯರಾದ ಬಸವರಾಜ ಗಡಾದ, ನಿರ್ಮಲ ತಳವಾರ, ಸೋಮಪ್ಪ ಜೋಗಣ್ಣವರ, ಶ್ರೀಶೈಲ ತಳವಾರ, ರಾಮಣ್ಣ, ಗವಿಸಿದ್ದಯ್ಯ ಗಂಧದ, ಶೇಖರ ಗುರಾಣಿ ಇದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>