ದೇವಘಾಟ್ನಲ್ಲಿ ಕುರಿ ಮೇಯಿಸಲು ಹೋಗಿದ್ದ ಗಂಗಾವತಿ ತಾಲ್ಲೂಕಿನ ವಿರುಪಾಪುರ ಗ್ರಾಮದ ಹನುಮಂತಪ್ಪ, ಹನುಮೇಶ ನಡುಗಡ್ಡೆಯಲ್ಲಿ ಸಿಲುಕಿದ್ದರು. ನೀರು ಕಡಿಮೆಯಿದ್ದಾಗ ಹತ್ತು ದಿನಗಳ ಹಿಂದೆ ಈ ಕುರಿಗಾರರು ದೇವಘಾಟ್ಗೆ ಹೋಗಿದ್ದರು. ಜಿಲ್ಲಾ ಅಗ್ನಿಶಾಮಕ ದಳದ ಠಾಣಾಧಿಕಾರಿ ಜಿ. ಕೃಷ್ಣೋಜಿ ಕಾರ್ಯಾಚರಣೆ ನೇತೃತ್ವ ವಹಿಸಿದ್ದರು.