ಬಿಕನಹಳ್ಳಿ ಮಠದ ಸಿದ್ಧೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿ, ಭಿಕ್ಷೆ ಬೇಡಿ ಎಲ್ಲಾ ಸಮಾಜದ ಮಕ್ಕಳಿಗೆ ಶಿಕ್ಷಣ ನೀಡಿದ ಹೆಮ್ಮೆಯ ಜಂಗಮ ಸಮಾಜ ನಮ್ಮದು. ಪಂಚಪೀಠದ ಅನುಯಾಯಿಗಳಾದ ನಮ್ಮ ಸಮಾಜಕ್ಕೆ 4,500 ವರ್ಷಗಳ ಇತಿಹಾಸವಿದೆ. ‘ಸಿದ್ಧಾಂತಶಿಖಾಮಣಿ’ ನಮ್ಮ ಪವಿತ್ರ ಧರ್ಮಗ್ರಂಥವಾಗಿದೆ. ಸಾಮಾನ್ಯರನ್ನು ಶಿವಯೋಗಿಯನ್ನಾಗಿ ಮಾಡುವ ಶಕ್ತಿ ಗುರುವಿಗೆ ಇದೆ ಎಂದರು.