ಕ್ಯಾದಿಗುಪ್ಪಾ ಚೆಕ್ಪೋಸ್ಟ್ ಬಳಿ ರಸ್ತೆ ವಿಭಜಕ ದಾಟುವ ವೇಳೆ ಇಲಕಲ್ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಬಾಬು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಚಾಲಕ ಕಾರಿನೊಂದಿಗೆ ಪರಾರಿಯಾಗಿದ್ದಾನೆ. ಕ್ಯಾದಿಗುಪ್ಪಾ ಗ್ರಾಮದ ಶರಣಪ್ಪ ಚಳಗೇರಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಇಲ್ಲಿಯ ಪೊಲೀಸರು ಕಾರು ಮತ್ತು ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ.