ಕಳೆದ ವರ್ಷ ಪಟ್ಟಣದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆ ಬಳಿ ಇದೇ ರೀತಿ ಬೈಕ್ದಲ್ಲಿ ವ್ಯಕ್ತಿಯೊಬ್ಬರು ಇರಿಸಿದ್ದ ಲಕ್ಷಾಂತರ ಹಣ ಕಳವಾಗಿತ್ತು. ಬೈಕ್ದಲ್ಲಿ ಹಣ ಇಡಬೇಡಿ, ಎಚ್ಚರಿಕೆಯಿಂದಿರಿ ಎಂದು ಜನರಿಗೆ ಹಲವು ಬಾರಿ ತಿಳಿವಳಿಕೆ ಮೂಡಿಸಿದರೂ ಮೇಲಿಂದ ಮೇಲೆ ಇಂಥ ಪ್ರಕರಣಗಳು ನಡೆಯುತ್ತಿವೆ. ಜನ ಜಾಗರೂಕರಾಗಿ ಇರಬೇಕು ಎಂದು ಸರ್ಕಲ್ ಇನ್ಸ್ಪೆಕ್ಟರ್ ಎನ್.ಆರ್.ನಿಂಗಪ್ಪ ತಿಳಿಸಿದರು.