ಕೊಪ್ಪಳ: ಸ್ವ ಗ್ರಾಮ ತಾಲ್ಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ಡಿಜೆ ಅಬ್ಬರಕ್ಕೆ ಸಂಸದ ಸಂಗಣ್ಣ ಕರಡಿ ಭಾನುವಾರ ಕುಣಿದು ಕುಪ್ಪಳಿಸಿದ್ದಾರೆ.
ಐದನೇ ದಿನದ ಗಣೇಶ ಮೂರ್ತಿ ವಿಸರ್ಜನೆಗೂ ಮುನ್ನ ಸಂಸದರು ಯುವಕರೊಂದಿಗೆ ಭರ್ಜರಿ ಸ್ಟೆಪ್ ಹಾಕಿರುವ ವಿಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಪ್ರತಿ ವರ್ಷದ ಗಣೇಶ ಹಬ್ಬದ ಸಂದರ್ಭದಲ್ಲಿ ಜಿಲ್ಲಾ ಕೇಂದ್ರದಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಯುವಕರೊಂದಿಗೆ ಸಂಗಣ್ಣ ಕರಡಿ ಹೆಜ್ಜೆ ಹಾಕುತ್ತಿದ್ದರು. ಮೂರ್ನಾಲ್ಕು ವರ್ಷದ ಹಿಂದೆ ಡಿಜೆ ನಿಷೇಧವಿದ್ದಾಗಲೂ ಯುವಕರ ಒತ್ತಾಯಕ್ಕೆ ಮಣಿದು ನಗರದ ಜವಾಹರ ರಸ್ತೆಯಲ್ಲಿ ಕುಣಿದಿದ್ದರು.
ಈ ವರ್ಷ ತಮ್ಮದೇ ಗ್ರಾಮದಲ್ಲಿ ಡಿಜೆ ಅಬ್ಬರಕ್ಕೆ ಕುಣಿದು, ಕುಪ್ಪಳಿಸಿ, ನೆರೆದ ಯುವಕರಲ್ಲಿ ಸಂತಸ ಇಮ್ಮಡಿಗೊಳಿಸಿದರು.