ಕೊಪ್ಪಳ: ಕೊಪ್ಪಳ ವಿಧಾನಸಭಾ ಕ್ಷೇತ್ರದ ಟಿಕೆಟ್ಗೆ ಜಿದ್ದಾಜಿದ್ದಿ ನಡೆದಿರುವ ಸಮಯದಲ್ಲಿಯೇ ಪಕ್ಷದ ಕೆಲ ಕಾರ್ಯಕರ್ತರು ’ಮುಂದಿನ ಎಂಎಲ್ಎ ಸಂಗಣ್ಣ ಅವರಿಗೆ ಜಯವಾಗಲಿ’ ಎನ್ನುವ ಘೋಷಣೆಗಳನ್ನು ಮೊಳಗಿಸಿದರು. ವೇದಿಕೆ ಕಾರ್ಯಕ್ರಮದ ಸಮಯದಲ್ಲಿಯೂ ಇದು ಮುಂದುವರಿಯಿತು. ಸಾರಿಗೆ ಸಚಿವ ಬಿ. ಶ್ರೀರಾಮುಲು ತಮ್ಮ ಭಾಷಣದಲ್ಲಿ ಸಂಗಣ್ಣ ಅವರ ಕೆಲಸಗಳನ್ನು ಪ್ರಧಾನವಾಗಿ ಉಲ್ಲೇಖಿಸಿದರು.