ಯಲಬುರ್ಗಾ (ಕೊಪ್ಪಳ ಜಿಲ್ಲೆ): ‘ಆರ್ಥಿಕವಾಗಿ ಹಿಂದುಳಿದ ಸಮುದಾಯಕ್ಕೆ ಶೇ 10ರಷ್ಟು ಮೀಸಲಾತಿ ನೀಡುವ ಪಟ್ಟಿಯಲ್ಲಿ 3ಬಿ ವರ್ಗವನ್ನೂ ಸೇರಿಸುವಂತೆ ಒತ್ತಾಯಿಸಲಾಗುತ್ತಿದೆ. ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ನಾನು ಮತ್ತು ವಿಜಯಾನಂದ ಕಾಶಪ್ಪನವರ ಬಿಟ್ಟರೆ ಬೇರೆ ಯಾರೂ ಇದಕ್ಕೆ ಧ್ವನಿಗೂಡಿಸಿಲ್ಲ. ಶಾಮನೂರು, ಖಂಡ್ರೆ ಇವರೆಲ್ಲ ಲಿಂಗಾಯತರು ಎಂದು ಹೇಳಿಕೊಂಡು ಲಾಭ ಹೊಡೆಯುವ ಗಿರಾಕಿಗಳು’ ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹರಿಹಾಯ್ದರು.