ಜಗತ್ತಿನಲ್ಲಿಯೇ ಗ್ರಂಥಾಲಯಕ್ಕೆ ಭಾರತ ವಿಶಿಷ್ಟ ಸ್ಥಾನ ನೀಡಿದೆ. ಶರಣರ ವಚನಗಳ ಸಲುವಾಗಿ ಯುದ್ಧವನ್ನೇ ಮಾಡಿದರು. ಬಿಜ್ಜಳ ಸೈನ್ಯ ವಚನಗಳನ್ನು ಹುಡುಕಲು ಸೇನೆಯನ್ನೇ ರವಾನಿಸಿತ್ತು. ಆದರೆ ವೈರಿಗಳ ಕೈಗೆ ಸಿಗದ ಹಾಗೆ ಜನರ ಬಾಯಲ್ಲಿ ಭದ್ರ ಮಾಡಿ ಶರಣರು ಕಗ್ಗಾಡು ಉಳಿವಿಗೆ ಹೋಗಿ, ಜ್ಞಾನ ಪರಂಪರೆಯನ್ನು ಉಳಿಸಿಕೊಂಡು ಬಂದರು. ಬೀದರ್ ಮಹಮ್ಮದ್ ಗವಾನನ ಗ್ರಂಥಾಲಯರೋಮ್ ಗ್ರಂಥಾಲಯಕ್ಕಿಂತಲೂ ಹೆಸರುವಾಸಿಯಾಗಿತ್ತು. ಪುಸ್ತಕ ಕಳ್ಳತನ ಎಂಬುವುದು ಸುಸಂಸ್ಕೃತ ಕಳ್ಳತನವಾಗಿದೆ ಎಂದು ಮಾರ್ಮಿಕವಾಗಿ ಹೇಳಿದರು.