ಗಂಗಾವತಿ: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಹಾಗೂ ಸಾಹಿತಿ ಶರಣಪ್ಪ ತಳ್ಳಿಯವರಿಗೆ 2020ನೇ ಸಾಲಿನ ‘ನಾಡೋಜ ಚೆನ್ನವೀರ ಕಣವಿ ಕಾವ್ಯ ಪ್ರಶಸ್ತಿ’ಯನ್ನು ಧಾರವಾಡದಲ್ಲಿ ಭಾನುವಾರ ಪ್ರದಾನ ಮಾಡಲಾಯಿತು.
ಧಾರವಾಡ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ರಂಜಾನ್ ದರ್ಗಾರವರು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪಡೆದ ಶರಣಪ್ಪ ತಳ್ಳಿಯವರಿಗೆ ಗಂಗಾವತಿಯ ಕಾವ್ಯ ಕಲರವದ ಸಾಹಿತಿ ಮಿತ್ರರು ಶುಭಕೋರಿದ್ದು, ಅವರ ಸಾಹಿತ್ಯ ಸೇವೆ ಸದಾ ನಿರಂತರವಾಗಿರಲೆಂದು ಹಾರೈಸಿದ್ದಾರೆ.
ವೇದಿಕೆಯಲ್ಲಿ ಸಾಹಿತಿಗಳಾದ ಡಾ.ಎಸ್.ಆರ್ ಗುಂಜಾಳ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯಾಧ್ಯಕ್ಷ ಕೊಟ್ರೇಶ ಉಪ್ಪಾರ, ಸಮುದ್ರವಳ್ಳಿ ವಾಸು, ಜೆ ಜೆ ನರಸಿಂಹ ಮೂರ್ತಿ ಸೇರಿದಂತೆ ಹಲವರು ಇದ್ದರು.