ಕೊಪ್ಪಳ: ಕಾರ್ಮಿಕ ವರ್ಗದ ನಾಯಕ ಎಸ್ಯುಸಿಐ ಕಮುನಿಸ್ಟ್ ಪಕ್ಷದ ಸ್ಥಾಪಕ ಶಿವದಾಸ ಘೋಷ್ಅವರ ಜನ್ಮಶತಾಬ್ದಿ ಕಾರ್ಯಕ್ರಮವನ್ನು ಪಕ್ಷದ ಕಚೇರಿಯಲ್ಲಿ ಆಚರಿಸಲಾಯಿತು.
ಸಂಘಟನೆಯ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಶರಣು ಗಡ್ಡಿ ಮಾತನಾಡಿ ‘ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಹಾಗೂ ಅನುಶೀಲನ ಸಮಿತಿ ಸದಸ್ಯರಾದ ಕಾಮ್ರೆಡ್ ಶಿವದಾಸ್ ನಿರಂತರವಾಗಿ ದುಡಿಯುವ ಜನಗಳ, ಶೋಷಿತ ಜನರ ವಿಮುಕ್ತಿಗಾಗಿ ಕಾರ್ಲ್ ಮಾರ್ಕ್ಸ್ ಅವರ ಚಿಂತನೆಗಳನ್ನು ಭಾರತ ನೆಲದಲ್ಲಿ ಹರಡಲು ಶ್ರಮಿಸಿದರು’ ಎಂದರು.