<p><strong>ಗಂಗಾವತಿ</strong>: ಇಲ್ಲಿನ ವಿರೂಪಾಪುರ ನಗರದ ಬಿಸಿಎಂ ಬಾಲಕರ ಮೆಟ್ರಿಕ್ ನಂತರದ ವಸತಿಯದಲ್ಲಿ ಗ್ಯಾಸ್ ಸಿಲಿಂಡರ್ ಖಾಲಿ ನೆಪದಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಮೆನು ಚಾರ್ಟ್ ಪ್ರಕಾರದ ಊಟಕ್ಕೆ ಕತ್ತರಿ ಹಾಕಲಾಗಿದೆ ಎಂದು ಆರೋಪಿಸಿ ಎಸ್ಎಫ್ಐ ಸಂಘಟನೆ ಗುರುವಾರ ತಾ.ಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.</p>.<p>ಸಂಘಟನೆ ಜಿಲ್ಲಾ ಸಮಿತಿ ಸದಸ್ಯ ಶರಣಬಸವ ಬಾದ್ನಟ್ಟಿ ಮಾತನಾಡಿ, ‘ವಸತಿ ನಿಲಯದ ನಿಲಯಪಾಲಕರು ಮತ್ತು ಅಡುಗೆ ಸಹಾಯಕರು ವಿದ್ಯಾರ್ಥಿಗಳಿಗೆ ಮೆನುಚಾರ್ಟ್ ಪ್ರಕಾರ ಅಡುಗೆ ಮಾಡಿ, ಊಟ ನೀಡುವುದೇ ಇಲ್ಲ. ವಿದ್ಯಾರ್ಥಿಗಳು ಈ ಬಗ್ಗೆ ಕೇಳಿದರೇ, ‘ಮಾಡಿದ್ದನ್ನು ತಿನ್ನಿ’ ಎಂದು ಉಡಾಫೆಯ ಉತ್ತರ ನೀಡುತ್ತಾರೆ’ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ವಸತಿ ನಿಲಯದ ನಿಲಯಪಾಲಕರು, ಅಡುಗೆ ಸಹಾಯಕರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಗುರುವಾರ ದಿನ ವಸತಿ ನಿಲಯದಲ್ಲಿ ಚಪಾತಿ, ಪಲ್ಯದೊಂದಿಗೆ ಅನ್ನ, ಸಾರು ಮಾಡಿ ಊಟ ನೀಡಬೇಕಿತ್ತು. ಬೇಜವಾಬ್ದಾರಿಯಿಂದ ಅನ್ನ, ಸಾರು ಮಾಡಿದ್ದಾರೆ. ಮೆನು ಪ್ರಕಾರ ಅಡುಗೆ ಏಕೆ ಮಾಡಿಲ್ಲವೆಂದು ಪ್ರಶ್ನಿಸಿದರೆ, ಸಿಲಿಂಡರ್ ಖಾಲಿಯಾಗಿದೆ ಎಂದು ನೆಪ ಹೇಳುತ್ತಿದ್ದಾರೆ. ಇದು ನಾಚಿಕೆಯ ಸಂಗತಿ ಎಂದು ದೂರಿದರು.</p>.<p>ನಂತರ ವಿದ್ಯಾರ್ಥಿಗಳ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ತಾ.ಪಂ ಇಒ ಸಮಸ್ಯೆ ಬಗೆಹರಿಸುವುದಾಗಿ ಮಾಹಿತಿ ನೀಡಿದರು. ಎಸ್ಎಫ್ಐ ಸದಸ್ಯರು ಪ್ರತಿಭಟನೆ ತಾತ್ಕಾಲಿಕವಾಗಿ ಹಿಂಪಡೆದು ತಾ.ಪಂ ಮ್ಯಾನೇಜರ್ ನಿಜಾಮುದ್ದೀನ್, ಬಿಸಿಎಂ ಇಲಾಖೆ ಹಿರಿಯ ನಿಲಯಪಾಲಕರಿಗೆ ಮನವಿ ಸಲ್ಲಿಸಲಾಯಿತು.</p>.<p>ಪ್ರತಿಭಟನೆ ವಿಷಯ ತಿಳಿಯುತ್ತಿದ್ದಂತೆ, ಪ್ರತಿಭಟನಾ ಸ್ಥಳಕ್ಕೆ ಊಟ ತಂದು ವಿದ್ಯಾರ್ಥಿಗಳಿಗೆ ನೀಡಲಾಯಿತು. ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ, ತಾಲ್ಲೂಕು ಅಧ್ಯಕ್ಷ ನಾಗರಾಜ ಯು., ಜಿಲ್ಲಾ ಜಂಟಿ ಕಾರ್ಯದರ್ಶಿ ಬಸಯ್ಯ ಹಿರೇಮಠ, ಮೌನೇಶ ಸೇರಿ ವಿದ್ಯಾರ್ಥಿಗಳಾದ ಮಲ್ಲಿ ಉತ್ನೂರ, ಕೌಸಿಕ್, ಮಂಜು ಚಿಕ್ಕಮದೀನಾಳ ಸೇರಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ</strong>: ಇಲ್ಲಿನ ವಿರೂಪಾಪುರ ನಗರದ ಬಿಸಿಎಂ ಬಾಲಕರ ಮೆಟ್ರಿಕ್ ನಂತರದ ವಸತಿಯದಲ್ಲಿ ಗ್ಯಾಸ್ ಸಿಲಿಂಡರ್ ಖಾಲಿ ನೆಪದಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಮೆನು ಚಾರ್ಟ್ ಪ್ರಕಾರದ ಊಟಕ್ಕೆ ಕತ್ತರಿ ಹಾಕಲಾಗಿದೆ ಎಂದು ಆರೋಪಿಸಿ ಎಸ್ಎಫ್ಐ ಸಂಘಟನೆ ಗುರುವಾರ ತಾ.ಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.</p>.<p>ಸಂಘಟನೆ ಜಿಲ್ಲಾ ಸಮಿತಿ ಸದಸ್ಯ ಶರಣಬಸವ ಬಾದ್ನಟ್ಟಿ ಮಾತನಾಡಿ, ‘ವಸತಿ ನಿಲಯದ ನಿಲಯಪಾಲಕರು ಮತ್ತು ಅಡುಗೆ ಸಹಾಯಕರು ವಿದ್ಯಾರ್ಥಿಗಳಿಗೆ ಮೆನುಚಾರ್ಟ್ ಪ್ರಕಾರ ಅಡುಗೆ ಮಾಡಿ, ಊಟ ನೀಡುವುದೇ ಇಲ್ಲ. ವಿದ್ಯಾರ್ಥಿಗಳು ಈ ಬಗ್ಗೆ ಕೇಳಿದರೇ, ‘ಮಾಡಿದ್ದನ್ನು ತಿನ್ನಿ’ ಎಂದು ಉಡಾಫೆಯ ಉತ್ತರ ನೀಡುತ್ತಾರೆ’ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ವಸತಿ ನಿಲಯದ ನಿಲಯಪಾಲಕರು, ಅಡುಗೆ ಸಹಾಯಕರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಗುರುವಾರ ದಿನ ವಸತಿ ನಿಲಯದಲ್ಲಿ ಚಪಾತಿ, ಪಲ್ಯದೊಂದಿಗೆ ಅನ್ನ, ಸಾರು ಮಾಡಿ ಊಟ ನೀಡಬೇಕಿತ್ತು. ಬೇಜವಾಬ್ದಾರಿಯಿಂದ ಅನ್ನ, ಸಾರು ಮಾಡಿದ್ದಾರೆ. ಮೆನು ಪ್ರಕಾರ ಅಡುಗೆ ಏಕೆ ಮಾಡಿಲ್ಲವೆಂದು ಪ್ರಶ್ನಿಸಿದರೆ, ಸಿಲಿಂಡರ್ ಖಾಲಿಯಾಗಿದೆ ಎಂದು ನೆಪ ಹೇಳುತ್ತಿದ್ದಾರೆ. ಇದು ನಾಚಿಕೆಯ ಸಂಗತಿ ಎಂದು ದೂರಿದರು.</p>.<p>ನಂತರ ವಿದ್ಯಾರ್ಥಿಗಳ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ತಾ.ಪಂ ಇಒ ಸಮಸ್ಯೆ ಬಗೆಹರಿಸುವುದಾಗಿ ಮಾಹಿತಿ ನೀಡಿದರು. ಎಸ್ಎಫ್ಐ ಸದಸ್ಯರು ಪ್ರತಿಭಟನೆ ತಾತ್ಕಾಲಿಕವಾಗಿ ಹಿಂಪಡೆದು ತಾ.ಪಂ ಮ್ಯಾನೇಜರ್ ನಿಜಾಮುದ್ದೀನ್, ಬಿಸಿಎಂ ಇಲಾಖೆ ಹಿರಿಯ ನಿಲಯಪಾಲಕರಿಗೆ ಮನವಿ ಸಲ್ಲಿಸಲಾಯಿತು.</p>.<p>ಪ್ರತಿಭಟನೆ ವಿಷಯ ತಿಳಿಯುತ್ತಿದ್ದಂತೆ, ಪ್ರತಿಭಟನಾ ಸ್ಥಳಕ್ಕೆ ಊಟ ತಂದು ವಿದ್ಯಾರ್ಥಿಗಳಿಗೆ ನೀಡಲಾಯಿತು. ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ, ತಾಲ್ಲೂಕು ಅಧ್ಯಕ್ಷ ನಾಗರಾಜ ಯು., ಜಿಲ್ಲಾ ಜಂಟಿ ಕಾರ್ಯದರ್ಶಿ ಬಸಯ್ಯ ಹಿರೇಮಠ, ಮೌನೇಶ ಸೇರಿ ವಿದ್ಯಾರ್ಥಿಗಳಾದ ಮಲ್ಲಿ ಉತ್ನೂರ, ಕೌಸಿಕ್, ಮಂಜು ಚಿಕ್ಕಮದೀನಾಳ ಸೇರಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>