ಸಭಾಂಗಣದ ಮುಂಭಾಗದಲ್ಲಿ ಸಾಮಾರ್ಥ್ಯ ಸೌಧ, ಕನ್ನಡ ಸಾಹಿತ್ಯ ಭವನ ಹಾಗೂ ಕೃಷ್ಣದೇವರಾಯ ಭವನವೂ ಇದೆ. ಇಲ್ಲಿ ನಿತ್ಯ ಸಾಹಿತಿಗಳು, ವಿವಿಧ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಬಂದು ಸಭೆ ನಡೆಸುತ್ತಾರೆ. ಆದರೆ, ಸಂಜೆಯಾದರೆ ಸಾಕು ಸಭಾಂಗಣದ ಆವರಣ ಕುಡುಕರ ಅಡ್ಡೆಯಾಗುತ್ತಿರುವುದು ಬೇಸರದ ಸಂಗತಿ ಎಂದು ಸಾರ್ವಜನಿಕರು ದೂರುತ್ತಾರೆ.