ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಬರುವ ಎಲ್ಲ ಹಳೆಯ ಉಪ ಕಾಲುವೆಗಳಿಗೆ ಕಾಂಕ್ರಿಟ್ ಲೈನಿಂಗ್ ಮಾಡಿ, ನೀರು ವ್ಯರ್ಥವಾಗುವುದನ್ನು ತಡೆದು ರೈತರಿಗೆ ಹೆಚ್ಚಿನ ನೀರನ್ನು ಒದಗಿಸುವುದು ಕಾಲುವೆ ಆಧುನೀಕರಣ ಯೋಜನೆಯ ಉದ್ದೇಶವಾಗಿದೆ. ಕಳೆದ ವರ್ಷವೇ ಕೆಲ ಕಾಲುವೆಗಳ ಕಾಮಗಾರಿ ಪ್ರಗತಿಯಲ್ಲಿವೆ. ಗಂಗಾವತಿ, ರಾಯಬಸವ ಇತ್ಯಾದಿ ಕಡೆಗಳಲ್ಲಿ ಈ ಕಾಮಗಾರಿಗಳು ನಡೆಯುತ್ತಿವೆ ಎಂದು ಹೇಳಿದರು.