<p>ಗಂಗಾವತಿ: ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಎಂದೇ ಪ್ರಖ್ಯಾತಿ ಪಡೆದ ಆನೆಗೊಂದಿ ಗ್ರಾಮದಲ್ಲಿ ಚರಂಡಿ ನೀರು ಶುದ್ಧೀಕರಣ ವ್ಯವಸ್ಥೆಯಿಲ್ಲದ ಕಾರಣ, ಜನರು ಹರಿ ಬಿಡುವ ಕೊಳಚೆ ನೀರು ನೇರವಾಗಿ ತುಂಗಭದ್ರಾ ನದಿಗೆ ಸೇರುತ್ತಿದ್ದು,ಈ ನೀರು ಕುಡಿಯಲು ಯೋಗ್ಯವಲ್ಲದ ಸ್ಥಿತಿ ತಲುಪುತ್ತಿದೆ.</p>.<p>ಪಶ್ಚಿಮ ಘಟ್ಟದ ಸಸ್ಯ ಸಂಕುಲಗಳ ನಡುವೆ ತುಂಗಭದ್ರಾ ನದಿಯ ನೀರು ಹರಿದು ಬರುತ್ತಿದ್ದು, ಈ ನೀರನ್ನು ಈ ಹಿಂದೆ ಅಮೃತಕ್ಕೆ ಸಮಾನ ಎನ್ನಲಾಗುತ್ತಿತ್ತು. ಇದೀಗ ಜಲಾಶಯದಿಂದ ಕಂಪ್ಲಿ ಸೇತುವೆಯವರೆಗೆ ಈ ನೀರು ಕುಡಿದರೆ ರೋಗಗಳು ಬರುತ್ತವೆ ಎಂಬ ಸಂದೇಶ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.</p>.<p>ತುಂಗಭದ್ರಾ ನದಿ ನೀರಿನ ರಕ್ಷಣೆಗಾಗಿ ಪರಿಸರ ಪ್ರೇಮಿಗಳು, ಸಾಹಿತಿಗಳು ಕಳೆದ ಒಂದು ವರ್ಷದಿಂದ ನಿರ್ಮಲ ತುಂಗಭದ್ರಾ ಅಭಿಯಾನದಡಿ ನದಿಗೆ ಕಾರ್ಖಾನೆ ಮತ್ತು ಚರಂಡಿ ನೀರು, ಪ್ಲಾಸ್ಟಿಕ್ ತ್ಯಾಜ್ಯ ಎಸೆಯದಂತೆ ಜನ ಜಾಗೃತಿ ಮೂಡಿಸುತ್ತಾ, ಸಾರ್ವಜನಿಕ ಕಾರ್ಯಕ್ರಮಗಳು ನಡೆಸುತ್ತಾ ಬರುತ್ತಿದ್ದಾರೆ.</p>.<p>ಇಷ್ಟೆಲ್ಲಾ ಜನ ಜಾಗೃತಿ ಮೂಡಿಸುತ್ತಿದ್ದರೂ, ನದಿಗೆ ಚರಂಡಿ ನೀರು ಬಿಡುವುದು, ಪ್ಲಾಸ್ಟಿಕ್ ತ್ಯಾಜ್ಯ ಎಸೆಯುತ್ತಿರುವುದು ಕಡಿಮೆಯಾಗುತ್ತಿಲ್ಲ.</p>.<p>ಎಲ್ಲೆಲ್ಲಿ ಚರಂಡಿ ನೀರು ಹರಿಯುವುದು: ವಿಜಯನಗರ ಸಾಮ್ರಾಜ್ಯದ ರಾಜಧಾನಿ ಎನ್ನುವ ಕಾರಣಕ್ಕೆ ಆನೆಗೊಂದಿ ಗ್ರಾಮ ವೀಕ್ಷಣೆಗೆ ದೇಶ-ವಿದೇಶಗಳಿಂದ ಇತಿಹಾಸಕಾರರು, ಪ್ರವಾಸಿಗರು ಆಗಮಿಸುತ್ತಾರೆ. ಇದರ ರಕ್ಷಣೆ ಹೊಣೆ ಹೊರಬೇಕಾದ ಅಧಿಕಾರಿಗಳು, ಜನಪ್ರತಿನಿಧಿಗಳು, ರಾಜವಂಶಸ್ಥರು, ಸಾರ್ವಜನಿಕರು ಕೈಕಟ್ಟಿ ಕುಳಿತಿದ್ದು, ಅಭಿವೃದ್ಧಿಗೆ ನಿರೀಕ್ಷೆ ಮಾಡದಂತಹ ಸ್ಥಿತಿಗೆ ತಲುಪಿದೆ.</p>.<p>ಹಾಗಾಗಿ ಗ್ರಾಮಸ್ಥರು ತಮ್ಮ ಮನೆಗಳ ಬಳಿ ಚರಂಡಿಗೆ ಬಿಡುವ ನೀರು, ಎಲ್ಲೆಡೆ ಸೇರಿ ಆನೆಗೊಂದಿ ಗ್ರಾಮದ 64 ಸಾಲಿನ ಕಲ್ಲಿನ ಮಂಟಪಕ್ಕೆ ತೆರಳುವ ರಸ್ತೆ ಬಳಿ, ತೋಟದ ಆಂಜನೇಯ ದೇವಸ್ಥಾನದ ಹಿಂಬದಿ, ಚಿಂತಾಮಣಿ ಸಮೀಪ, ತಳವಾರಗಟ್ಟದ ಬಳಿ ನೇರವಾಗಿ ನದಿಗೆ ಸೇರುತ್ತಿದೆ. ಈ ನೀರು ಮುಂದಿನ ಗ್ರಾಮದವರಿಗೆ ಕುಡಿಯಲು ಯೋಗ್ಯವಿಲ್ಲದಂತಾಗಿವೆ.</p>.<p>ಕಾರ್ಯನಿರ್ವಹಿಸದ ಎಲ್.ಡಬ್ಲ್ಯೂ.ಎಂ ಘಟಕ: ಆನೆಗೊಂದಿ ಗ್ರಾಮದಲ್ಲಿ ಮನೆಗಳ ತ್ಯಾಜ್ಯ ನೀರು, ಚರಂಡಿ ನೀರು ವೈಜ್ಞಾನಿಕವಾಗಿ ಶುದ್ಧೀಕರಿಸಿ, ನದಿಗೆ ಬಿಡಲು 2022- 23ನೇ ಸಾಲಿನಲ್ಲಿ ₹10ಲಕ್ಷ ಅನುದಾನದಲ್ಲಿ ಆಂಜನೇಯ ದೇವಸ್ಥಾನದ ಬಳಿ, 2025-26ನೇ ಸಾಲಿನಲ್ಲಿ ಚಿಂತಾಮಣಿ ಬಳಿ ₹4.90ಲಕ್ಷ ಬಳಸಿ ದ್ರವ ತ್ಯಾಜ್ಯ ನಿರ್ವಹಣೆ ಘಟಕ ನಿರ್ಮಿಸಿದ್ದರು. ಈ ಎರಡೂ ಘಟಕಗಳು ಸರಿಯಾಗಿ ನಿರ್ವಹಿಸುತ್ತಿಲ್ಲ.</p>.<p>ಆಂಜನೇಯನ ದೇವಸ್ಥಾನದ ಬಳಿ ದ್ರವ ತ್ಯಾಜ್ಯ ನಿರ್ವಹಣೆ ಘಟಕ ದುರಸ್ತಿಗೆ ಕಾದಿದೆ. ಈ ಬಗ್ಗೆ ಪಿಡಿಒ ಕ್ರಮ ಜರುಗಿಸುತ್ತಿಲ್ಲ. ಚಿಂತಾಮಣಿ ಬಳಿ ಘಟಕದ ಬಳಿ ಈಚೆಗೆ ಕಸ, ಗಿಡ-ಗಂಟಿಗಳು ತೆರವುಗೊಳಿಸಿದ್ದು, ಘಟಕ ಸರಿಯಾಗಿ ಕೆಲಸ ಮಾಡದ ಕಾರಣ, ಚರಂಡಿ ನೀರು ಶುದ್ಧಿಕರಣವೇ ಆಗುತ್ತಿಲ್ಲ.</p>.<p>ಶೌಚ ಮಾಡುವ ಸ್ಥಳವಾದ ಕೋಟೆ: ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಆನೆಗೊಂದಿ ತಳವಾರಗಟ್ಟದ ಬಳಿಯಿಂದ 64 ಸಾಲಿನ ಕಲ್ಲಿನ ಮಂಟಪದವರೆಗೆ ತುಂಗಭದ್ರಾ ನದಿಯ ದಡಕ್ಕೆ ಅಟಿಕೊಂಡು ಬೃಹತ್ ಕಲ್ಲುಗಳಿಂದ ಗೊಡೆ(ಕೋಟೆ) ನಿರ್ಮಿಸಿದ್ದು, ಇದು ಗ್ರಾಮಸ್ಥರ ಬಯಲು ಶೌಚದ ಸ್ಥಳವಾಗಿದೆ. ಹಾಗೇ ಪ್ರಮುಖ ಮಂಟಪ, ದೇವಸ್ಥಾನದ ಆಸು-ಪಾಸು ಸಹ ಶೌಚ ಮಾಡಲಾಗುತ್ತಿದೆ. ವೀಕ್ಷಣೆ ಬರುವ ಪ್ರವಾಸಿಗರು ದುರ್ವಾಸನೆಗೆ ಮೂಗು ಮುಚ್ಚಿಕೊಂಡು, ಅಧಿಕಾರಿಗಳನ್ನು ನಿಂದಿಸುತ್ತಾ, ಹೊರ ಬರುತ್ತಾರೆ ಎಂದು ಗ್ರಾಮಸ್ಥ ರಾಜು ಅಚ್ಚೊಳಿ ಹೇಳುತ್ತಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260508-35-1979554888</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗಂಗಾವತಿ: ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಎಂದೇ ಪ್ರಖ್ಯಾತಿ ಪಡೆದ ಆನೆಗೊಂದಿ ಗ್ರಾಮದಲ್ಲಿ ಚರಂಡಿ ನೀರು ಶುದ್ಧೀಕರಣ ವ್ಯವಸ್ಥೆಯಿಲ್ಲದ ಕಾರಣ, ಜನರು ಹರಿ ಬಿಡುವ ಕೊಳಚೆ ನೀರು ನೇರವಾಗಿ ತುಂಗಭದ್ರಾ ನದಿಗೆ ಸೇರುತ್ತಿದ್ದು,ಈ ನೀರು ಕುಡಿಯಲು ಯೋಗ್ಯವಲ್ಲದ ಸ್ಥಿತಿ ತಲುಪುತ್ತಿದೆ.</p>.<p>ಪಶ್ಚಿಮ ಘಟ್ಟದ ಸಸ್ಯ ಸಂಕುಲಗಳ ನಡುವೆ ತುಂಗಭದ್ರಾ ನದಿಯ ನೀರು ಹರಿದು ಬರುತ್ತಿದ್ದು, ಈ ನೀರನ್ನು ಈ ಹಿಂದೆ ಅಮೃತಕ್ಕೆ ಸಮಾನ ಎನ್ನಲಾಗುತ್ತಿತ್ತು. ಇದೀಗ ಜಲಾಶಯದಿಂದ ಕಂಪ್ಲಿ ಸೇತುವೆಯವರೆಗೆ ಈ ನೀರು ಕುಡಿದರೆ ರೋಗಗಳು ಬರುತ್ತವೆ ಎಂಬ ಸಂದೇಶ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.</p>.<p>ತುಂಗಭದ್ರಾ ನದಿ ನೀರಿನ ರಕ್ಷಣೆಗಾಗಿ ಪರಿಸರ ಪ್ರೇಮಿಗಳು, ಸಾಹಿತಿಗಳು ಕಳೆದ ಒಂದು ವರ್ಷದಿಂದ ನಿರ್ಮಲ ತುಂಗಭದ್ರಾ ಅಭಿಯಾನದಡಿ ನದಿಗೆ ಕಾರ್ಖಾನೆ ಮತ್ತು ಚರಂಡಿ ನೀರು, ಪ್ಲಾಸ್ಟಿಕ್ ತ್ಯಾಜ್ಯ ಎಸೆಯದಂತೆ ಜನ ಜಾಗೃತಿ ಮೂಡಿಸುತ್ತಾ, ಸಾರ್ವಜನಿಕ ಕಾರ್ಯಕ್ರಮಗಳು ನಡೆಸುತ್ತಾ ಬರುತ್ತಿದ್ದಾರೆ.</p>.<p>ಇಷ್ಟೆಲ್ಲಾ ಜನ ಜಾಗೃತಿ ಮೂಡಿಸುತ್ತಿದ್ದರೂ, ನದಿಗೆ ಚರಂಡಿ ನೀರು ಬಿಡುವುದು, ಪ್ಲಾಸ್ಟಿಕ್ ತ್ಯಾಜ್ಯ ಎಸೆಯುತ್ತಿರುವುದು ಕಡಿಮೆಯಾಗುತ್ತಿಲ್ಲ.</p>.<p>ಎಲ್ಲೆಲ್ಲಿ ಚರಂಡಿ ನೀರು ಹರಿಯುವುದು: ವಿಜಯನಗರ ಸಾಮ್ರಾಜ್ಯದ ರಾಜಧಾನಿ ಎನ್ನುವ ಕಾರಣಕ್ಕೆ ಆನೆಗೊಂದಿ ಗ್ರಾಮ ವೀಕ್ಷಣೆಗೆ ದೇಶ-ವಿದೇಶಗಳಿಂದ ಇತಿಹಾಸಕಾರರು, ಪ್ರವಾಸಿಗರು ಆಗಮಿಸುತ್ತಾರೆ. ಇದರ ರಕ್ಷಣೆ ಹೊಣೆ ಹೊರಬೇಕಾದ ಅಧಿಕಾರಿಗಳು, ಜನಪ್ರತಿನಿಧಿಗಳು, ರಾಜವಂಶಸ್ಥರು, ಸಾರ್ವಜನಿಕರು ಕೈಕಟ್ಟಿ ಕುಳಿತಿದ್ದು, ಅಭಿವೃದ್ಧಿಗೆ ನಿರೀಕ್ಷೆ ಮಾಡದಂತಹ ಸ್ಥಿತಿಗೆ ತಲುಪಿದೆ.</p>.<p>ಹಾಗಾಗಿ ಗ್ರಾಮಸ್ಥರು ತಮ್ಮ ಮನೆಗಳ ಬಳಿ ಚರಂಡಿಗೆ ಬಿಡುವ ನೀರು, ಎಲ್ಲೆಡೆ ಸೇರಿ ಆನೆಗೊಂದಿ ಗ್ರಾಮದ 64 ಸಾಲಿನ ಕಲ್ಲಿನ ಮಂಟಪಕ್ಕೆ ತೆರಳುವ ರಸ್ತೆ ಬಳಿ, ತೋಟದ ಆಂಜನೇಯ ದೇವಸ್ಥಾನದ ಹಿಂಬದಿ, ಚಿಂತಾಮಣಿ ಸಮೀಪ, ತಳವಾರಗಟ್ಟದ ಬಳಿ ನೇರವಾಗಿ ನದಿಗೆ ಸೇರುತ್ತಿದೆ. ಈ ನೀರು ಮುಂದಿನ ಗ್ರಾಮದವರಿಗೆ ಕುಡಿಯಲು ಯೋಗ್ಯವಿಲ್ಲದಂತಾಗಿವೆ.</p>.<p>ಕಾರ್ಯನಿರ್ವಹಿಸದ ಎಲ್.ಡಬ್ಲ್ಯೂ.ಎಂ ಘಟಕ: ಆನೆಗೊಂದಿ ಗ್ರಾಮದಲ್ಲಿ ಮನೆಗಳ ತ್ಯಾಜ್ಯ ನೀರು, ಚರಂಡಿ ನೀರು ವೈಜ್ಞಾನಿಕವಾಗಿ ಶುದ್ಧೀಕರಿಸಿ, ನದಿಗೆ ಬಿಡಲು 2022- 23ನೇ ಸಾಲಿನಲ್ಲಿ ₹10ಲಕ್ಷ ಅನುದಾನದಲ್ಲಿ ಆಂಜನೇಯ ದೇವಸ್ಥಾನದ ಬಳಿ, 2025-26ನೇ ಸಾಲಿನಲ್ಲಿ ಚಿಂತಾಮಣಿ ಬಳಿ ₹4.90ಲಕ್ಷ ಬಳಸಿ ದ್ರವ ತ್ಯಾಜ್ಯ ನಿರ್ವಹಣೆ ಘಟಕ ನಿರ್ಮಿಸಿದ್ದರು. ಈ ಎರಡೂ ಘಟಕಗಳು ಸರಿಯಾಗಿ ನಿರ್ವಹಿಸುತ್ತಿಲ್ಲ.</p>.<p>ಆಂಜನೇಯನ ದೇವಸ್ಥಾನದ ಬಳಿ ದ್ರವ ತ್ಯಾಜ್ಯ ನಿರ್ವಹಣೆ ಘಟಕ ದುರಸ್ತಿಗೆ ಕಾದಿದೆ. ಈ ಬಗ್ಗೆ ಪಿಡಿಒ ಕ್ರಮ ಜರುಗಿಸುತ್ತಿಲ್ಲ. ಚಿಂತಾಮಣಿ ಬಳಿ ಘಟಕದ ಬಳಿ ಈಚೆಗೆ ಕಸ, ಗಿಡ-ಗಂಟಿಗಳು ತೆರವುಗೊಳಿಸಿದ್ದು, ಘಟಕ ಸರಿಯಾಗಿ ಕೆಲಸ ಮಾಡದ ಕಾರಣ, ಚರಂಡಿ ನೀರು ಶುದ್ಧಿಕರಣವೇ ಆಗುತ್ತಿಲ್ಲ.</p>.<p>ಶೌಚ ಮಾಡುವ ಸ್ಥಳವಾದ ಕೋಟೆ: ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಆನೆಗೊಂದಿ ತಳವಾರಗಟ್ಟದ ಬಳಿಯಿಂದ 64 ಸಾಲಿನ ಕಲ್ಲಿನ ಮಂಟಪದವರೆಗೆ ತುಂಗಭದ್ರಾ ನದಿಯ ದಡಕ್ಕೆ ಅಟಿಕೊಂಡು ಬೃಹತ್ ಕಲ್ಲುಗಳಿಂದ ಗೊಡೆ(ಕೋಟೆ) ನಿರ್ಮಿಸಿದ್ದು, ಇದು ಗ್ರಾಮಸ್ಥರ ಬಯಲು ಶೌಚದ ಸ್ಥಳವಾಗಿದೆ. ಹಾಗೇ ಪ್ರಮುಖ ಮಂಟಪ, ದೇವಸ್ಥಾನದ ಆಸು-ಪಾಸು ಸಹ ಶೌಚ ಮಾಡಲಾಗುತ್ತಿದೆ. ವೀಕ್ಷಣೆ ಬರುವ ಪ್ರವಾಸಿಗರು ದುರ್ವಾಸನೆಗೆ ಮೂಗು ಮುಚ್ಚಿಕೊಂಡು, ಅಧಿಕಾರಿಗಳನ್ನು ನಿಂದಿಸುತ್ತಾ, ಹೊರ ಬರುತ್ತಾರೆ ಎಂದು ಗ್ರಾಮಸ್ಥ ರಾಜು ಅಚ್ಚೊಳಿ ಹೇಳುತ್ತಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260508-35-1979554888</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>