ಯಲಬುರ್ಗಾ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಕರಮುಡಿ ಗ್ರಾಮದ ಹೊರವಲಯದಲ್ಲಿ ಭಾನುವಾರ ಸಂಜೆ ಹಳ್ಳ ದಾಟಲು ಯತ್ನಿಸಿ ಇಬ್ಬರು ಮಹಿಳೆಯರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಗ್ರಾಮದ ರತ್ನವ್ವ ಗುರಪ್ಪ ಮಾನಶೆಟ್ಟಿ (48) ಮತ್ತು ಶಾಂತವ್ವ ದೇವಪ್ಪ ಮ್ಯಾಗೇರಿ (44) ಕೊಚ್ಚಿಕೊಂಡು ಹೋದವರು. ಭಾರಿ ಮಳೆ ಸುರಿದ ಕಾರಣ ಹಳ್ಳ ತುಂಬಿ ಹರಿಯುತಿತ್ತು. ಹೊಲದ ಕೃಷಿ ಕೆಲಸಕ್ಕೆಂದು ಹೋಗಿದ್ದ ಅವರಿಬ್ಬರೂ ಹಳ್ಳವನ್ನು ದಾಟಲು ಯತ್ನಿಸಿದ ವೇಳೆ ಘಟನೆ ಜರುಗಿದೆ.
ಅವರಿಬ್ಬರಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ತಹಶೀಲ್ದಾರ್ ಶ್ರೀಶೈಲ ತಳವಾರ ತಿಳಿಸಿದ್ದಾರೆ. ಯಲಬುರ್ಗಾ ಪಿಎಸ್ಐ ಹನಮಂತಪ್ಪ ತಳವಾರ ನೇತೃತ್ವದಲ್ಲಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಗ್ರಾಮಸ್ಥರು ಹುಡುಕಾಟ ನಡೆಸಿದ್ದಾರೆ.