ಕಿನ್ನಾಳ, ಮಾದಿನೂರು ಗ್ರಾಮಗಳಲ್ಲಿ ಅನಧಿಕೃತ ಮರಳು ಸಾಗಣೆ ಮಾಡಲಾಗುತ್ತಿದೆ ಎನ್ನುವ ದೂರು ಕೇಳಿ ಬಂದಿತ್ತು. ತಾಲ್ಲೂಕು ಮರಳು ರಕ್ಷಣಾ ಉಸ್ತುವಾರಿ ಸಮಿತಿಯ ಸದಸ್ಯರಾದ ಕೊಪ್ಪಳ ತಹಶೀಲ್ದಾರ್ ವಿಠ್ಠಲ ಚೌಗುಲೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಿ. ಸನತ್, ಗ್ರಾಮೀಣ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕ ಮುದ್ದುರಂಗ, ಪಿಡಿಒಗಳಾದ ವೀರಣ್ಣ ಹಾಗೂ ಪೂರ್ಣಚಂದ್ರಸ್ವಾಮಿ ಅವರನ್ನು ಒಳಗೊಂಡ ತಂಡ ದಾಳಿ ನಡೆಸಿದೆ.