ಪಟ್ಟಣದಲ್ಲಿ ಸೋಮವಾರ ಜೆಸ್ಕಾಂ ವತಿಯಿಂದ ಡಿ 19ರವರೆಗೆ ಹಮ್ಮಿಕೊಂಡಿರುವ ಸಕಾಲ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯುತ್ ತಂತಿ ತುಂಡಾದರೆ, ವಿತರಣಾ ಪರಿವರ್ತಕಗಳು ವಿಫಲಗೊಂಡಿರುವುದು, ಮೀಟರ್ಗೆ ಸಂಬಂಧಿಸಿದ ದೂರುಗಳು, ಹೊಸ ಸಂಪರ್ಕ ಕಲ್ಪಿಸಿಕೊಳ್ಳುವುದು, ಹೆಚ್ಚುವರಿ ಲೋಡ್ಗೆ ಅರ್ಜಿ ಸಲ್ಲಿಕೆ. ಮಾಲಿಕತ್ವದ ವರ್ಗಾವಣೆ, ಜಕಾತಿ ಬದಲಾವಣೆ, ಬಿಲ್ಗಳಿಗೆ ಸಂಬಂಧಿಸಿದ ದೂರುಗಳ ಇತ್ಯರ್ಥ, ವಿದ್ಯುತ್ ಸಂಪರ್ಕ ಕಡಿತ, ಠೇವಣಿ ಮರುಪಾವತಿ ಸೇರಿದಂತೆ ವಿವಿಧ ರೀತಿಯ ಕೆಲಸ ಕಾರ್ಯಗಳು, ದೂರುಗಳನ್ನು ನಿಗದಿತ ಅವಧಿಯಲ್ಲಿ ಪರಿಹರಿಸಿಕೊಳ್ಳಲು ಸಕಾಲ ಜನರಿಗೆ ಒಂದು ಅತ್ಯುತ್ತಮ ಯೋಜನೆಯಾಗಿದೆ ಎಂದರು. ಅಲ್ಲದೆ ಸಕಾಲದ ಅರ್ಜಿಗಳನ್ನು ಇತ್ಯರ್ಥ ಮಾಡದ ಅಧಿಕಾರಿ ಅಥವಾ ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಜರುಗಿಸುವುದಕ್ಕೂ ಅವಕಾಶವಿದೆ ಎಂದು ವಿವರಿಸಿದರು.