ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಕಾನಂದರ ಚಿಂತನೆ ಅಳವಡಿಸಿಕೊಳ್ಳಿ

ಸ್ವಾಮಿ ವಿವೇಕಾನಂದ ಯುವಕ ಸಂಘದ ಅಧ್ಯಕ್ಷ ವೀರೇಶ ಶೆಟ್ಟರ್‌ ಸಲಹೆ
Last Updated 12 ಜನವರಿ 2022, 11:13 IST
ಅಕ್ಷರ ಗಾತ್ರ

ಕಾರಟಗಿ: ‘ಸ್ವಾಮಿ ವಿವೇಕಾನಂದರು ಯುವ ಶಕ್ತಿಗೆ ಮಾರ್ಗದರ್ಶಕರು. ಅವರ ಚಿಂತನೆಗಳನ್ನು ಯುವಜನತೆ ಅಳವಡಿಸಿಕೊಳ್ಳಬೇಕು’ ಎಂದು ಸ್ವಾಮಿ ವಿವೇಕಾನಂದ ಯುವಕ ಸಂಘದ ಅಧ್ಯಕ್ಷ ವೀರೇಶ ಶೆಟ್ಟರ್‌ ಸಲಹೆ ನೀಡಿದರು.

ಪಟ್ಟಣದಲ್ಲಿ ಬುಧವಾರ ನಡೆದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ,‘ಯುವ ಜನಾಂಗ ಕ್ಷಣಿಕ ಸುಖದ ದಾಸರಾಗದೇ, ಸತ್ಸಂಗ ಮಾಡಿ ಉತ್ತಮ ಸಾಧನೆ ಮಾಡಿ, ಬಾಳಿ ಬೆಳಗಬೇಕು’ ಎಂದು ಹೇಳಿದರು.

ಶರಣಪ್ಪ ಕಾಯಿಗಡ್ಡೆ ಮಾತನಾಡಿ,‘ಏಳಿ, ಎದ್ದೇಳಿ ಎಂಬ ವಿವೇಕಾನಂದರ ಸಂದೇಶವೇ ಯುವ ಜನಾಂಗಕ್ಕೆ ಸ್ಫೂರ್ತಿ’ ಎಂದರು.

ಯುವ ಮುಖಂಡರಾದ ಮಹೇಶ್ ಕಂದಗಲ್, ಬಸವರಾಜ ಶಿವಪ್ಪ ಹಿಂದುಪುರ, ರಮೇಶ ಕೋಟ್ಯಾಳ್, ಬಸವರಾಜ ಅರಳಿ, ಚಂದ್ರು ಸಜ್ಜನ್, ಶರಣಪ್ರಕಾಶ ರೆಡ್ಡಿ, ನಾಗರಾಜ್ ಶೆಟ್ಟರ್ ಹಾಗೂ ಸುರೇಂದ್ರ ಕುಮಾರ ಶೆಟ್ಟರ್ ಇದ್ದರು.

ಪಟ್ಟಣದ ವಿವಿಧೆಡೆ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT