ಪ್ರಜ್ವಲ್ ಗವಿಸಿದ್ದಪ್ಪ ಛಲವಾದಿ (15) ಎಂಬ ಬಾಲಕನು ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿದ್ದನು ಎಂಬ ಪ್ರಕರಣ ಕೊಲೆಯಂದು ಪ್ರಕರಣ ದಾಖಲಾಗಿದೆ.
ಇದೇ ಪಟ್ಟಣದ ಶಂಕ್ರಪ್ಪ ಈಬೇರಿ ಎಂಬ ಯುವಕ ಪ್ರಜ್ವಲ್ ನನ್ನು ದುಡ್ಡಿನ ಆಮಿಷ ಒಡ್ಡಿ ಗಾಯಾಳವಾಗುವಂತೆ ಬಡಿದು ಬಾವಿಯಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾನೆ ಎಂದು ಪ್ರಕರಣ ದಾಖಲಾಗಿದೆ. ಆರೋಪಿ ಶಂಕ್ರಪ್ಪನನ್ನು ಜೈಲಿಗೆ ಕಳಿಸಲಾಗಿದೆ.