ಕಾಡಾ ಅಧ್ಯಕ್ಷ ಎಚ್.ಎಂ.ತಿಪ್ಪೇರು
ದ್ರಸ್ವಾಮಿ ಮಾತನಾಡಿ,‘ಎಡದಂಡೆ ಮುಖ್ಯ ಕಾಲುವೆಗೆ ಜು.18 ರಿಂದ 4100 ಕ್ಯುಸೆಕ್, ಬಲದಂಡೆ ಮೇಲ್ಮಟ್ಟದ ಕಾಲುವೆಗೆ 1130 ಕ್ಯುಸೆಕ್., ಬಲದಂಡೆ ಕೆಳಮಟ್ಟದ ಕಾಲುವೆಗೆ 700 ಕ್ಯುಸೆಕ್ನಂತೆ ನ.30 ರವರೆಗೆ, ರಾಯ ಬಸವ ಕಾಲುವೆಗೆ ಜೂ.1 ರಿಂದ ಡಿ.10 ರವರೆಗೆ 235 ಕ್ಯುಸೆಕ್, ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಜು. 18 ರಿಂದ 25 ಕ್ಯುಸೆಕ್ನಂತೆ ನ.30 ರವರೆಗೆ ನೀರು ಹರಿಸಲಾಗುತ್ತದೆ’ ಎಂದರು. ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ,‘ಕಾಲುವೆಗೆ ಮುಂಚಿತವಾಗಿ ನೀರು ಬಿಡುವುದರಿಂದ ಭತ್ತ ಬೆಳೆಗಾರರು ನಿಗದಿತ ಸಮಯದಲ್ಲಿ ಭತ್ತ ನಾಟಿ ಮಾಡಲು ಅನುಕೂಲವಾಗುತ್ತದೆ. ಕಾಲುವೆಯ ಕೊನೆಯ ಭಾಗದವರೆಗೆ ನೀರು ಹರಿಸಬೇಕು ಎಂಬುವುದು ನಮ್ಮ ಸರ್ಕಾರದ ಸಂಕಲ್ಪ. ಹೀಗಾಗಿ ರೈತರು ಅಕ್ರಮವಾಗಿ ತೋಡುಗಳನ್ನು ಮಾಡಿ ನೀರನ್ನು ದುರ್ಬಳಕೆ ಮಾಡಿಕೊಳ್ಳಬಾರದು’ ಎಂದು ಮನವಿ ಮಾಡಿದರು. ಮುಖಂಡರಾದ ಫಾಲಾಕ್ಷಪ್ಪ, ಬಸವರಾಜ, ಪ್ರದೀಪ್ ಹಿಟ್ನಾಳ, ಮಹಾಂತೇಶ, ಬಸವರಾಜ ಪಾಟೀಲ, ಬಾಲಚಂದ್ರನ್, ಜಲಾಶಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.