‘ಕೊಪ್ಪಳ, ಬಳ್ಳಾರಿ ಜಿಲ್ಲೆಗೆ ಹೊಂದಿಕೊಂಡಂತೆ ಕರಡಿಧಾಮ ನಿರ್ಮಿಸಲಾಗಿದೆ. ಕರಡಿಗಳಿಗೆ ಬೇಕಾಗಿರುವ ವಾತಾವರಣ ನಿರ್ಮಾಣ, ಆಹಾರ, ನೀರಿನ ಸೌಲಭ್ಯ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಿಂಕೆ ಒಂದಕ್ಕೆ ವನ ಅವಶ್ಯಕತೆ ಇಲ್ಲ. ಚಿರತೆ, ಕರಡಿ ಸೇರಿ ಇತರ ಪ್ರಾಣಿಗಳ ರಕ್ಷಣೆ ಮಾಡುವ ಹೊಣೆ ಇದೆ. ಅವುಗಳಿಗೆ ತೊಂದರೆಯಾಗದಂತೆ ಪ್ರಾಣಿಗಳ ರಕ್ಷಣೆಗೆ ಮುಂದಾಗಲಾಗುವುದು’ ಎಂದು ಹೇಳಿದರು. ನಂತರ ಪಂಪಾಸರೋವರಕ್ಕೆ ತೆರಳಿ, ಅಲ್ಲಿಯ ವಿಜಯಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಶಾಸಕ ಪರಣ್ಣ ಮುನವಳ್ಳಿ, ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ತಹಶೀಲ್ದಾರ್ ನಾಗರಾಜ, ಜಿಲ್ಲಾ ಅರಣ್ಯ ಅಧಿಕಾರಿ ಹರ್ಷಾಭಾನು ಪ್ರಮುಖರಾದ ಸಿದ್ಧರಾಮಯ್ಯಸ್ವಾಮಿ, ಎಚ್.ಸಿ.ಯಾದವ ಹಾಗೂ ಗೌರೀಶ ಇದ್ದರು.