ರೈತರು ತಮ್ಮ ಜಮೀನುಗಳಿಗೆ ಹೋಗಿ ಬರಲು ಅನುಕೂಲವಿರುವ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಸರ್ಕಾರ ಕಾಳಜಿ ತೋರಲಿ. ರೈತರ ಮನವಿಗೆ ಸ್ಪಂದಿಸದಿದ್ದರೆ ಕ್ಷೇತ್ರದ ಶಾಸಕರ ಕಾರ್ಯವೈಖರಿಯನ್ನು ರೈತ ವಿರೋಧಿ ಎಂದೇ ಭಾವಿಸಬೇಕಾಗುತ್ತದೆ.
-ರಾಮಣ್ಣ ಪೂಜಾರ, ರೈತ ಮುಖಂಡ ಯಾಪಲದಿನ್ನಿ
ತೀರಾ ಹದಗೆಟ್ಟಿರುವ ಹಿರೇವಂಕಲಕುಂಟಾ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಿಂದ ಯಾಪಲದಿನ್ನಿ ಹಾಗೂ ನಿಲೋಗಲ್-ಯಾಪಲದಿನ್ನಿ ಗ್ರಾಮದವರೆಗೆ ತುರ್ತಾಗಿ ರಸ್ತೆ ಅಭಿವೃದ್ಧಿಪಡಿಸಬೇಕಾಗಿದೆ.
-ಹನುಮೇಶ ಹುಣಶಿಹಾಳ, ಅಧ್ಯಕ್ಷ ಕರವೇ ಗ್ರಾಮ ಘಟಕ ಯಾಪಲದಿನ್ನಿ