ಕಾಂಗ್ರೆಸ್ ಅವಧಿಯಲ್ಲಿ, ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ ಇಂತಹ ದಾಳಿಗಳು ನಡೆದಿವೆ. ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿಲ್ಲ. ಎಲ್ಲವೂ ಕಾನೂನಿನಂತೆ ನಡೆಯುತ್ತದೆ. ಕೋರ್ಟ್ ವಿಚಾರನೆ ನಡೆಸಿ, ತೀರ್ಪು ನೀಡುತ್ತದೆ. ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಏಕೆ ಬಂಧಿಸಿತು? ಇ.ಡಿ ವಿಶೇಷ ಕೋರ್ಟ್ಏಕೆ ಜಾಮಿನು ನೀಡಲಿಲ್ಲ? ಅವರ ತಾಯಿ ಕಣ್ಣೀರು ಹಾಕಿದ್ದನ್ನು ನೋಡಿದೆ. ಯಾರಿಗೂ ಈ ರೀತಿ ಆಗಬಾರದು. ಯಾರೂ ಇಂತಹ ಪರಿಸ್ಥಿತಿ ತಂದುಕೊಳ್ಳಬಾರದು ಎಂದು ಪ್ರತಿಕ್ರಿಯಿಸಿದರು.