ಈ ಪ್ರದೇಶಗಳಲ್ಲಿ ವಾಸಿಸುವ 4,570 ಜನರ ರಕ್ತದ ಮಾದರಿ ಪರೀಕ್ಷೆಗೆ ಒಳಪಡಿಸಲಾಗಿದ್ದು, 139 ಜನರಲ್ಲಿ ಕೆಎಫ್ಡಿ ಇರುವುದು ದೃಢಪಟ್ಟಿದೆ. ಮೂವರು ಮೃತಪಟ್ಟಿದ್ದಾರೆ. ಹಾಗಾಗಿ, ತೀರ್ಥಹಳ್ಳಿ ತಾಲ್ಲೂಕು ಮಂಡಗದ್ದೆ, ಬೆಟ್ಟಬಸರವಾನಿ, ಕನ್ನಂಗಿ, ಕೋಣಂದೂರು, ಸಾಗರ ತಾಲ್ಲೂಕು ಅರಳಗೋಡು, ಕಾರ್ಗಲ್, ತುಮರಿ ಭಾಗದ ಅರಣ್ಯದೊಳಗೆ ಹೋಗಿಒಣ ಎಲೆಗಳನ್ನು ತರುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.