ಈ ಬಾರಿ ಬಿಜೆಪಿಗೆ ಎಲ್ಲ ಧರ್ಮ, ಜಾತಿಯ ಜನರೂ ಬೆಂಬಲ ನೀಡಿದ್ದಾರೆ. ಮೋದಿ ಪ್ರಧಾನಿಯಾಗಿ ಮತ್ತೆ ಅಧಿಕಾರ ಸ್ವೀಕರಿಸುತ್ತಿರುವುದಕ್ಕೆ ಇಡೀ ಜಗತ್ತು ಸಂಭ್ರಮಿಸುತ್ತಿದೆ. ವಿಶ್ವದ ಬಹುತೇಕ ಗಣ್ಯರು ಆ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ. ಈ ಸಂತೋಷ ಹಂಚಿಕೊಳ್ಳಲು ಅಂದು ಬೆಳಿಗ್ಗೆ 10ಕ್ಕೆ ನಗರದ ಎಲ್ಲ ಮನೆಗಳಿಗೂ ಪಕ್ಷದ ಕಾರ್ಯಕರ್ತರು ಲಾಡು ತಲುಪಿಸಲಿದ್ದಾರೆ.ಪ್ರಮುಖ ರಸ್ತೆಗಳ ಅಂಗಡಿ, ಕಚೇರಿಗಳಲ್ಲೂ ಹಂಚಲಾಗುವುದು ಎಂದು ಶಾಸಕ ಈಶ್ವರಪ್ಪ ಮಾಹಿತಿ ನೀಡಿದರು.