ಚನ್ನಪಟ್ಟಣ ತಾಲ್ಲೂಕಿನ ಮೊಳೆದೊಡ್ಡಿ ಗ್ರಾಮದ ರವೀಂದ್ರ ಶಿಕ್ಷೆಗೆ ಒಳಗಾದವರು. 2015ರ ಆಗಸ್ಟ್ 20ರಂದು ಅವರು ತಮ್ಮ ಗ್ರಾಮದವರೇ ಆದ ಗಂಗಮ್ಮ ಎಂಬುವರನ್ನು ಹತ್ಯೆ ಮಾಡಿದ್ದರು. ಗ್ರಾಮಕ್ಕೆ ಸಮೀಪದ ಕಾಡಿನಲ್ಲಿ ಗಂಗಮ್ಮ ಜಾನುವಾರು ಮೇಯಿಸಲು ತೆರಳಿದ ಸಂದರ್ಭ ಅವರನ್ನು ಹಿಂಬಾಲಿಸಿದ್ದ ಆರೋಪಿಯು ಮಚ್ಚು ತೋರಿಸಿ ಆಕೆಯ ಒಡವೆಗಳನ್ನು ದೋಚಲು ಯತ್ನಿಸಿದ್ದರು. ಅದಕ್ಕೆ ಆಕೆ ಪ್ರತಿರೋಧ ಒಡ್ಡಿದಾಗ ಕತ್ತು ಕೊಯ್ದು ಹತ್ಯೆ ಮಾಡಿದ್ದರು. ಬಳಿಕ ಆಕೆಯ ಮೈ ಮೇಲಿನ ಚಿನ್ನಾಭರಣ ಹಾಗೂ ಮೊಬೈಲ್ ಅನ್ನು ತೆಗೆದುಕೊಂಡು ಪರಾರಿಯಾಗಿದ್ದರು.