ಒಂದು ಪಕ್ಷದ ಟಿಕೆಟ್ ಪಡೆದು ಜನರಿಂದ ಆಯ್ಕೆಯಾದ ಶಾಸಕರಿಗೆ ಆಮಿಷ ಒಡ್ಡಲಾಗುತ್ತಿದೆ. ದೇಶಭಕ್ತಿಯ ಪಾಠ ಮಾಡುವ ಬಜರಂಗದಳ, ಆರ್ಎಸ್ಎಸ್, ಬಿಜೆಪಿ ಮುಖಂಡರಿಗೆ ನೈತಿಕತೆ ಇಲ್ಲವೇ?. ಅಧಿಕಾರ ಹಿಡಿಯಲು ಪದೇಪದೇ ವಿಫಲವಾದರೂ ಯಡಿಯೂರಪ್ಪ ಬುದ್ಧಿ ಕಲಿತಿಲ್ಲ. ಇದರಲ್ಲಿ ಅವರು ಪಾತ್ರಧಾರಿ. ಅಮಿತ್ ಷಾ ಸೂತ್ರಧಾರಿ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಛೇಡಿಸಿದರು.