‘ಮತದಾನ ಮುಗಿದ ನಂತರ ಕುಬಟೂರಿನ ಮನೆಯಲ್ಲೇ ಇದ್ದೆ. ನೂರಾರು ಜನರು ಬಂದು ಮಾತನಾಡಿಸಿಕೊಂಡು ಹೋದರು. ನಿತ್ಯವೂ ಮಧ್ಯರಾತ್ರಿ 12ರ ನಂತರ ಮಲಗಿ ಅಭ್ಯಾಸವಾಗಿತ್ತು. ಮಂಗಳವಾರ ರಾತ್ರಿ 10.45ಕ್ಕೆ ಮಲಗಿದೆ. ಇನ್ನೂ ಮೂರ್ನಾಲ್ಕು ದಿನ ವಿಶ್ರಾಂತಿ ಪಡೆಯುವೆ. ಏ. 28 ಪುತ್ರ ಸೂರ್ಯನ ಜನುಮ ದಿನ. ಅಲ್ಲಿಯವರೆಗೂ ಕುಟುಂಬದ ಜತೆ ಕಾಲ ಕಳೆಯುವೆ. ಸಹೋದರಿಯರಾದ ಗೀತಾ, ಸುಜಾತಾ, ಅನಿತಾ ಅವರನ್ನು ಭೇಟಿ ಮಾಡುವೆ. ಆಮೇಲೆ ಕಾಂಗ್ರೆಸ್, ಜೆಡಿಎಸ್ ಮುಖಂಡರ ಜತೆ ಚರ್ಚಿಸಿದ ನಂತರ ಜಿಲ್ಲಾ ಮಟ್ಟದಲ್ಲಿ ಕಾರ್ಯಕರ್ತರ ಕೃತಜ್ಞತಾ ಸಭೆ ಆಯೋಜಿಸುವೆ ’ಎಂದು ವಿವರ ನೀಡಿದರು.