ಘಟನೆ ವಿವರ: ಜ.11ರಂದು ಬೆಳಿಗ್ಗೆ 5ಗಂಟೆ ಸಮಯದಲ್ಲಿ ಮಂಡ್ಯ ನಗರದ ಸ್ವರ್ಣಸಂದ್ರದ ಪೆಟ್ರೊಲ್ ಬಂಕ್ ಬಳಿ ಬೆಂಗಳೂರು ರಸ್ತೆಯಿಂದ ಗುತ್ತಲು ರಸ್ತೆ ಕಡೆಗೆ ಬೈಕ್ನಲ್ಲಿ ಮೂವರು ಅನುಮಾನಾಸ್ಪದವಾಗಿ ರೀತಿಯಲ್ಲಿ ತಿರುಗಾಡುತ್ತಿದ್ದರು. ಗಸ್ತಿನಲ್ಲಿದ್ದ ಪೊಲೀ ಸರಾದ ವಿ.ಗಿರೀಶ್, ಆನಂದ್ ಅವರನ್ನು ವಿಚಾರಿಸಿದಾಗ ಬೈಕ್ನ ದಾಖಲಾತಿ, ಸಮಂಜಸ ಉತ್ತರ ನೀಡದ ಕಾರಣ ಠಾಣೆಗೆ ಕರೆದುಕೊಂಡು ವಿಚಾರಣೆ ನಡೆಸಿದಾಗ ಪ್ರಕರಣದಲ್ಲಿ ಮತ್ತೊಬ್ಬ ಭಾಗಿಯಾಗಿರುವ ವಿಷಯ ಗೊತ್ತಾಗಿದೆ.