ತಾಲ್ಲೂಕಿನ ದೊಡ್ಡಪಾಳ್ಯ ಗ್ರಾಮದ ಜಯರಾಮೇಗೌಡ ಶನಿವಾರ ₹ 10 ಸಾವಿರ ಖರ್ಚು ಮಾಡಿ ರಸ್ತೆಯ ಗುಂಡಿ ಮುಚ್ಚಿಸಿ ಸಮತಟ್ಟು ಮಾಡಿಸಿದರು. ಜೆಸಿಬಿ ಯಂತ್ರವನ್ನು ಬಾಡಿಗೆಗೆ ತಂದು ಎರಡು ಕಿ.ಮೀ.ನಷ್ಟು ರಸ್ತೆಯನ್ನು ತಾತ್ಕಾಲಿಕವಾಗಿ ಮಟ್ಟಸ ಮಾಡಿಸಿದರು. ಬೆಳಿಗ್ಗೆ 7ರಿಂದ ಮಧ್ಯಾಹ್ನ 12 ಗಂಟೆಗೆ ವರೆಗೆ ರಸ್ತೆ ದುರಸ್ತಿ ಕಾರ್ಯ ನಡೆಯಿತು. ಮಣ್ಣಿನ ರಸ್ತೆಯ ಕೊರಕಲು, ದಿಬ್ಬಗಳನ್ನು ಸರಿ ಮಾಡಿಸಿದ್ದು, ಎತ್ತಿನಗಾಡಿ ಹಾಗೂ ವಾಹನಗಳು ಓಡಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ.