ಶನಿವಾರಸಂಭವಿಸಿದ ಈ ಭೀಕರ ಅಪಘಾತದಲ್ಲಿ,ರವಿ(30), ಮಂಜುಳಾ(25) ದಂಪತಿ ಹಾಗೂ ಅವರ ಮಕ್ಕಳಾದಸಾಗರ್(6), ಸುಕನ್ಯಾ(10) ಸಾವಿಗೀಡಾಗಿದ್ದಾರೆ. ಮೃತರು ಮಂಡ್ಯ ತಾಲ್ಲೂಕಿನ ಹೆಬ್ಬಕವಾಡಿ ಗ್ರಾಮದವರಾಗಿದ್ದು, ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ನಲ್ಲಿ ವಾಸವಾಗಿದ್ದರು. ಭಾನುವಾರ ರಜೆಯಿದ್ದ ಕಾರಣದಿಂದ ಊರಿಗೆ ಬರುತ್ತಿದ್ದರು ಎನ್ನಲಾಗಿದೆ.