<p><strong>ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ):</strong> ಕ್ಷೇತ್ರದ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರು ಶನಿವಾರ ಆಡಿದ ‘ಆದಿಚುಂಚನಗಿರಿ ಮಠ ದಾರಿ ತಪ್ಪುತ್ತಿದೆ’ ಮಾತು ಬಿಸಿ ಚರ್ಚೆಗೆ ಗ್ರಾಸವಾಯಿತು.</p>.<p>ಪಟ್ಟಣದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಬಾಲ ಜಗತ್ ಶಾಲಾ ಕಟ್ಟಡ, ಮಹಾ ಗಣಪತಿ ದೇಗುಲ ಲೋಕಾರ್ಪಣೆ, ಬಾಲಗಂಗಾಧರನಾಥ ಸ್ವಾಮೀಜಿ ಅವರ 81ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಮಠಕ್ಕೆ ಬಾಲಗಂಗಾಧರನಾಥ ಸ್ವಾಮೀಜಿ ಭದ್ರ ಬುನಾದಿ ಹಾಕಿದ್ದಾರೆ. ಎಲ್ಲರನ್ನೂ ಒಟ್ಟಿಗೇ ಕರೆದೊಯ್ಯುವ ಪರಂಪರೆ ಮಠದ್ದು. ಮಠದ ಪೀಠಾಧಿಪತಿಗಳಾದ ಇಂದಿನ ಸ್ವಾಮೀಜಿಯ ನಡೆ– ನುಡಿಯಲ್ಲಿ ವ್ಯತ್ಯಾಸ ಕಾಣುತ್ತಿದೆ ಎಂಬ ಭಾವನೆ ಮೂಡುತ್ತಿದೆ. ಈ ಮಾತನ್ನು ನೋವಿನಿಂದ ಹೇಳುತ್ತಿದ್ದೇನೆ’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.</p>.<p>ಈ ಮಾತಿಗೆ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿ, ‘ಮಠ ಹಾದಿ ತಪ್ಪುತ್ತಿದೆ ಎಂಬ ಮಾತು ಒಪ್ಪುವಂತಹದ್ದಲ್ಲ. ನಮ್ಮ ಸ್ವಾಮೀಜಿಯ ವ್ಯಕ್ತಿತ್ವ ಇತರ ಸ್ವಾಮೀಜಿಗಳಿಗೆ ಮೇಲ್ಪಂಕ್ತಿಯಾಗಿದೆ. ಸ್ವಾಮೀಜಿಯವರಿಗೆ ನಿಮ್ಮ ಹಾದಿ ಸರಿಪಡಿಸಿಕೊಳ್ಳಿ ಎಂದು ಹೇಳುವ ಮಟ್ಟಿಗೆ ದೊಡ್ಡವರಾಗಿದ್ದೇವಾ? ಇಂಥ ಮಾತುಗಳು ತರವಲ್ಲ’ ಎಂದು ಪ್ರತಿಪಾದಿಸಿದರು. </p>.<p>ಆಶೀರ್ವಚನ ನೀಡಿದ ನಿರ್ಮಲಾನಂದನಾಥ ಸ್ವಾಮೀಜಿ, ‘ಮಠ ದಾರಿ ತಪ್ಪದ ಹಾಗೆ ನಡೆಯುತ್ತಿದೆ, ಅನುಮಾನ ಬೇಡ’ ಎಂದರು.</p>.<p>‘ಯಾರು ಏನೇ ಹೇಳಿದರೂ ಮಠದ ಕೆಲಸ ಮಾದರಿಯಾದುದು’ ಎಂದು ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಅವರು ಸ್ವಾಮೀಜಿ ಮಾತನ್ನು ಬೆಂಬಲಿಸಿದರು. </p>.<p>ಈ ಸನ್ನಿವೇಶಕ್ಕೆ ವಿವಿಧ ಶಾಖಾ ಮಠಗಳ ಸ್ವಾಮೀಜಿಗಳು, ರಾಜಕಾರಣಿಗಳು ಮತ್ತು ಸಂಘ ಸಂಸ್ಥೆಗಳ ಮುಖ್ಯಸ್ಥರು ಸಾಕ್ಷಿಯಾದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ):</strong> ಕ್ಷೇತ್ರದ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರು ಶನಿವಾರ ಆಡಿದ ‘ಆದಿಚುಂಚನಗಿರಿ ಮಠ ದಾರಿ ತಪ್ಪುತ್ತಿದೆ’ ಮಾತು ಬಿಸಿ ಚರ್ಚೆಗೆ ಗ್ರಾಸವಾಯಿತು.</p>.<p>ಪಟ್ಟಣದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಬಾಲ ಜಗತ್ ಶಾಲಾ ಕಟ್ಟಡ, ಮಹಾ ಗಣಪತಿ ದೇಗುಲ ಲೋಕಾರ್ಪಣೆ, ಬಾಲಗಂಗಾಧರನಾಥ ಸ್ವಾಮೀಜಿ ಅವರ 81ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಮಠಕ್ಕೆ ಬಾಲಗಂಗಾಧರನಾಥ ಸ್ವಾಮೀಜಿ ಭದ್ರ ಬುನಾದಿ ಹಾಕಿದ್ದಾರೆ. ಎಲ್ಲರನ್ನೂ ಒಟ್ಟಿಗೇ ಕರೆದೊಯ್ಯುವ ಪರಂಪರೆ ಮಠದ್ದು. ಮಠದ ಪೀಠಾಧಿಪತಿಗಳಾದ ಇಂದಿನ ಸ್ವಾಮೀಜಿಯ ನಡೆ– ನುಡಿಯಲ್ಲಿ ವ್ಯತ್ಯಾಸ ಕಾಣುತ್ತಿದೆ ಎಂಬ ಭಾವನೆ ಮೂಡುತ್ತಿದೆ. ಈ ಮಾತನ್ನು ನೋವಿನಿಂದ ಹೇಳುತ್ತಿದ್ದೇನೆ’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.</p>.<p>ಈ ಮಾತಿಗೆ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿ, ‘ಮಠ ಹಾದಿ ತಪ್ಪುತ್ತಿದೆ ಎಂಬ ಮಾತು ಒಪ್ಪುವಂತಹದ್ದಲ್ಲ. ನಮ್ಮ ಸ್ವಾಮೀಜಿಯ ವ್ಯಕ್ತಿತ್ವ ಇತರ ಸ್ವಾಮೀಜಿಗಳಿಗೆ ಮೇಲ್ಪಂಕ್ತಿಯಾಗಿದೆ. ಸ್ವಾಮೀಜಿಯವರಿಗೆ ನಿಮ್ಮ ಹಾದಿ ಸರಿಪಡಿಸಿಕೊಳ್ಳಿ ಎಂದು ಹೇಳುವ ಮಟ್ಟಿಗೆ ದೊಡ್ಡವರಾಗಿದ್ದೇವಾ? ಇಂಥ ಮಾತುಗಳು ತರವಲ್ಲ’ ಎಂದು ಪ್ರತಿಪಾದಿಸಿದರು. </p>.<p>ಆಶೀರ್ವಚನ ನೀಡಿದ ನಿರ್ಮಲಾನಂದನಾಥ ಸ್ವಾಮೀಜಿ, ‘ಮಠ ದಾರಿ ತಪ್ಪದ ಹಾಗೆ ನಡೆಯುತ್ತಿದೆ, ಅನುಮಾನ ಬೇಡ’ ಎಂದರು.</p>.<p>‘ಯಾರು ಏನೇ ಹೇಳಿದರೂ ಮಠದ ಕೆಲಸ ಮಾದರಿಯಾದುದು’ ಎಂದು ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಅವರು ಸ್ವಾಮೀಜಿ ಮಾತನ್ನು ಬೆಂಬಲಿಸಿದರು. </p>.<p>ಈ ಸನ್ನಿವೇಶಕ್ಕೆ ವಿವಿಧ ಶಾಖಾ ಮಠಗಳ ಸ್ವಾಮೀಜಿಗಳು, ರಾಜಕಾರಣಿಗಳು ಮತ್ತು ಸಂಘ ಸಂಸ್ಥೆಗಳ ಮುಖ್ಯಸ್ಥರು ಸಾಕ್ಷಿಯಾದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>