ಮಂಡ್ಯ: ‘ಎಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಬೀಳಿಸಿದ, ಒಕ್ಕಲಿಗ ವಿರೋಧಿ ಅನರ್ಹ ಶಾಸಕರಿಗೆ ಒಕ್ಕಲಿಗರು ಮತ ಹಾಕಬಾರದು’ ಎಂಬ ಒಕ್ಕಣೆಯ ಸಂದೇಶವೊಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಚಿತ್ರದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
'ಜೆಡಿಎಸ್ ಬೆಂಗಳೂರು' ಎನ್ನುವ ಫೇಸ್ಬುಕ್ ಪುಟದಲ್ಲಿ ಸ್ವಾಮೀಜಿಯ ಭಾವಚಿತ್ರದೊಂದಿಗೆ ಇರುವ ಸಂದೇಶವನ್ನು ಪ್ರಕಟಿಸಲಾಗಿದೆ.
‘ಅದು ಯಾರೋ ಸೃಷ್ಟಿಸಿದ ಸುಳ್ಳು ಸುದ್ದಿ. ಆದಿಚುಂಚನಗಿರಿ ಮಠ ಎಂದಿಗೂ ರಾಜಕೀಯ ಪಕ್ಷಗಳ ಪರ– ವಿರೋಧವಿರುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಅಪಪ್ರಚಾರ ಮಾಡುವುದು ಸರಿಯಲ್ಲ’ ಆದಿಚುಂಚನಗಿರಿ ಮಠ ಸ್ಪಷ್ಟಪಡಿಸಿದೆ.