ಶ್ರೀರಂಗಪಟ್ಟಣ: ಇಲ್ಲಿಗೆ ಸಮೀಪದ ರಂಗನತಿಟ್ಟು ಪಕ್ಷಿಧಾಮಕ್ಕೆ ಮಾಜಿ ಕ್ರಿಕೆಟಿಗ ಅನಿಲ್ಕುಂಬ್ಳೆ ಸೋಮವಾರ ಭೇಟಿ ನೀಡಿದ್ದರು.
ಇಬ್ಬರು ಸ್ನೇಹಿತರ ಜತೆ ಮಧ್ಯಾಹ್ನ ಒಂದು ಗಂಟೆ ವೇಳೆಗೆ ಇಲ್ಲಿಗೆ ಆಗಮಿಸಿದ ಅವರು ಸಂಜೆ 6 ಗಂಟೆ ವರೆಗೆ ಪಕ್ಷಿಧಾಮದಲ್ಲಿದ್ದರು. ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕರೂ ಆಗಿರುವ ಅವರು ದೋಣಿ ವಿಹಾರ ನಡೆಸಿ ವಿವಿಧ ಪಕ್ಷಿಗಳ ಫೋಟೊ ತೆಗೆದರು.
‘ಅನಿಲ್ಕುಂಬ್ಳೆ ಅರಣ್ಯ ಇಲಾಖೆಯ ರಾಯಭಾರಿಯಾಗಿದ್ದಾರೆ. ಕೆಲವು ದಿನಗಳ ಹಿಂದೆಯೂ ಇಲ್ಲಿಗೆ ಭೇಟಿ ನೀಡಿದ್ದರು. ಮಂಗಳವಾರ ಮಧ್ಯಾಹ್ನ ಪಕ್ಷಿಧಾಮದಲ್ಲೇ ಊಟ ಮಾಡಿದರು. ಸಂಜೆ ಇಲ್ಲಿಂದ ತೆರಳಿದರು’ ಎಂದು ಪಕ್ಷಿಧಾಮದ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ (ಡಿಆರ್ಎಫ್ಒ) ಪುಟ್ಟಮಾದೇಗೌಡ ತಿಳಿಸಿದರು.