ಈ ವರ್ಷ ಕರಿಘಟ್ಟ ಅರಣ್ಯಕ್ಕೆ 15 ದಿನಗಳಲ್ಲಿ ಎರಡು ಬಾರಿ ಬೆಂಕಿ ಬಿದ್ದಿದೆ. ಆಲ, ಅರಳಿ, ಮಾವು, ಬೇವು, ಬಸರಿ, ಬಾಗೆ, ಹತ್ತಿ, ಹಲಸು– ಹೀಗೆ ಬಗೆ ಬಗೆಯ ಗಿಡಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಹೋಗಿವೆ. ಈ ಪೈಕಿ ಶೇ.20ರಷ್ಟು ಗಿಡಗಳು ಸಂಪೂರ್ಣ ಕರಕಲಾಗಿವೆ. ಉಳಿದ ಗಿಡಗಳನ್ನು ಉಳಿಸಿಕೊಳ್ಳಲೇಬೇಕು ಎಂಬ ಹಿರಿಯಾಸೆಯಿಂದ ಹಸಿರು ಪಡೆ ಕಾರ್ಯಕರ್ತರು ನೀರು ಹಾಕುವ ಕೆಲಸವನ್ನು ವ್ರತದಂತೆ ಮಾಡುತ್ತಿದ್ದಾರೆ.