ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಗನ್ನಾಥ ದೇಗುಲಕ್ಕೆ ಕಸ್ತೂರಿ ಪೂರೈಕೆ ಇಲ್ಲ’

Last Updated 10 ಫೆಬ್ರುವರಿ 2018, 18:56 IST
ಅಕ್ಷರ ಗಾತ್ರ

ಪುರಿ: ಕಾನೂನು ತೊಡಕುಗಳಿಂದ ಇಲ್ಲಿನ ಜಗನ್ನಾಥ ದೇವಾಲಯಕ್ಕೆ ಇನ್ನು ಮುಂದೆ ‘ಕಸ್ತೂರಿ’ ಪೂರೈಕೆ ಸಾಧ್ಯವಿಲ್ಲ ಎಂದು ನೇಪಾಳದ ಕೊನೆಯ ದೊರೆ ಜ್ಞಾನೇಂದ್ರ ಬಿರ್ ಬಿಕ್ರಮ್ ಶಾ ದೇವ್ ತಿಳಿಸಿದ್ದಾರೆ.

ಜಿಂಕೆ ಪ್ರಭೇದಕ್ಕೆ ಸೇರಿದ ಗಂಡು ಕಸ್ತೂರಿ ಮೃಗದಿಂದ  ‘ಕಸ್ತೂರಿ’ ಸುಗಂಧದ್ರವ್ಯದ ಸಾರವನ್ನು ತೆಗೆಯಲಾಗುತ್ತದೆ. ಈ ದ್ರವ್ಯಕ್ಕಾಗಿ ಈ ಪ್ರಾಣಿಗಳ ಹತ್ಯೆ ಹೆಚ್ಚಿ ಈಗ ಅಳಿವಿನ ಅಂಚಿನಲ್ಲಿ ಇವೆ.

ಪುರಿಯಲ್ಲಿ ನಡೆದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರ ಪಟ್ಟಾಭಿಷೇಕದ ಬೆಳ್ಳಿ ಮಹೋತ್ಸವದಲ್ಲಿ ಭಾಗವಹಿಸಿದ್ದ ಅವರು ‘ಅಳಿವಿನ ಅಂಚಿನಲ್ಲಿ ಇರುವ ಈ ಪ್ರಾಣಿಯಿಂದ ಇನ್ನು ಕಸ್ತೂರಿ ಸಂಗ್ರಹಿಸುವುದು ಕಾನೂನು ಬಾಹಿರ’ ಎಂದಿದ್ದಾರೆ.

12ನೇ ಶತಮಾನದಿಂದ ಜಗನ್ನಾಥ ದೇವಾಲಯದ ದೇವರ ವಿಗ್ರಹಗಳಿಗೆ ಕಸ್ತೂರಿಯನ್ನು ಹಚ್ಚುವ ಆಚರಣೆ ಇತ್ತು. ಈ ಕಸ್ತೂರಿಯನ್ನು ದೇವಾಲಯಕ್ಕೆ ಪೂರೈಸುವ ವಿಶೇಷ ಸೇವೆಯನ್ನು ನೇಪಾಳದ ರಾಜಮನೆತನ ನಡೆಸಿಕೊಡುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT