ಗುರುವಾರವೂ ಕೆಲವು ಅಪರಿಚಿತರು ಒಂದಿಷ್ಟು ಬಿದಿರು ಮರಗಳನ್ನು ಅಕ್ರಮವಾಗಿ ಕಡಿದು ಬೇರೆಡೆಗೆ ಸಾಗಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಸುಳಿಯಲಿಲ್ಲ. ಮರ ಕಡಿಯುತ್ತಿದ್ದ ಅಪರಿಚಿತರು ತಮ್ಮ ಪರಿಚಯವನ್ನು ಹೇಳಿಕೊಳ್ಳಲು ತಡವರಿಸಿ, ‘ಪುರಸಭೆಯವರು ಮರ ಕಡಿಯಲು ಹೇಳಿರುವುದರಿಂದ ಕಡಿಯುತ್ತಿದ್ದೇವೆ’ ಎಂದರು.