ಹಲಗೂರು ನಿವಾಸಿ ಅಲ್ತಾಫ್ ಪಾಷಾ ರೇಷ್ಮೆ ಗೂಡು ವ್ಯಾಪಾರಕ್ಕಾಗಿ ಬೆಳಗಿನ ಜಾವ ಆರು ಗಂಟೆಯಲ್ಲಿ ಹಲಗೂರಿನ ಪ್ರಮುಖ ವೃತ್ತದಲ್ಲಿ ನಿಂತಿದ್ದರು. ಈ ಸಂದರ್ಭದಲ್ಲಿ ಪ್ರತ್ಯಕ್ಷಗೊಂಡ ಎರಡು ಕರಡಿಗಳು ಅಲ್ತಾಫ್ ಪಾಷಾ ಅವರಿಗೆ ಹಿಂಬದಿಗೆ ಗುದ್ದಿ ಸಣ್ಣ ಗಾಯ ಮಾಡಿದೆ. ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ನಾಯಿಗಳ ಬೊಗಳುವಿಕೆಯಿಂದ ಹೆದರಿದ ಕರಡಿಗಳು ತಕ್ಷಣ ಗಾಬರಿಗೊಳಗಾಗಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಕಡೆ ಓಡಿ ಹೋಗಿವೆ.