ತಾಲ್ಲೂಕಿನ ವ್ಯಾಪ್ತಿಯಲ್ಲಿ ಹರಿಯುವ ವಿಶ್ವೇಶ್ವರಯ್ಯ, ಚಿಕ್ಕದೇವರಾಯಸಾಗರ (ಸಿಡಿಎಸ್), ವಿರಿಜಾ, ಬಂಗಾರ ದೊಡ್ಡಿ, ರಾಜಪರಮೇಶ್ವರಿ ಮತ್ತು ರಾಮಸ್ವಾಮಿ ನಾಲೆಗಳಲ್ಲಿ ಎರಡು ದಿನಗಳಿಂದ ನೀರು ಹರಿಯುತ್ತಿದೆ. ತಮ್ಮ ಗದ್ದೆಗಳಿಗೆ ನೀರುಣಿಸಿ ಭತ್ತದ ನಾಟಿಗೆ ಹದ ಮಾಡುವ ಕಾಯಕದಲ್ಲಿ ರೈತರು ತೊಡಗಿದ್ದಾರೆ. ಬೆಳಗೊಳ ಮತ್ತು ಕೆ.ಶೆಟ್ಟಹಳ್ಳಿ ಹೋಬಳಿ ವ್ಯಾಪ್ತಿಯ ಹಳೇ ಬಯಲುಗಳಲ್ಲಿ, ಈ ಮೊದಲೇ ಪೈರು ಬೆಳೆಸಿಕೊಂಡಿದ್ದ ರೈತರು ಭತ್ತದ ಪೈರು ನಾಟಿ ಕಾರ್ಯವನ್ನು ಆರಂಭಿಸಿದ್ದಾರೆ.