ಒಂದು ತಿಂಗಳ ಹಿಂದೆ ವಾಹನವೊಂದು ಡಿಕ್ಕಿ ಹೊಡೆದು ಶಿಥಿಲಗೊಂಡಿದ್ದ ಈ ತಡೆಗೋಡೆ ಇದೀಗ ಮತ್ತಷ್ಟು ಕುಸಿದಿದೆ. 20 ಅಡಿಗಳಿಗಿಂತಲೂ ಹೆಚ್ಚು ಉದ್ದದಷ್ಟು ತಡೆಗೋಡೆ ಮುರಿದು ಬಿದ್ದಿದೆ. ಮೈಸೂರು ಕಡೆ ತೆರಳುವ ವಾಹನಗಳ ಚಾಲಕರು ತುಸು ಮೈ ಮರೆತರೂ ನದಿಗೆ ಬೀಳು ಸಂಭವ ಹೆಚ್ಚಾಗಿದೆ. ಈ ಸೇತುವೆಯ ಹಿಂದೆ, ಬೆಂಗಳೂರು ಮತ್ತು ಬನ್ನೂರು ರಸ್ತೆಗಳು ಕೂಡುತ್ತವೆ. ಈ ಸ್ಥಳದಲ್ಲಿ ತೀವ್ರ ತಿರುವು ಕೂಡ ಇರುವುದು ಅಪಾಯದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.