ಲಾಕ್ಡೌನ್ನಲ್ಲಿ ಬರಬೇಡಿ ಎಂದವರೇ ಈಗ ಬನ್ನಿ ಎನ್ನುತ್ತಾರೆ: ಕೋವಿಡ್ ಸೋಂಕು ವೇಗವಾಗಿ ಹರಡುತ್ತಿದ್ದ ಪ್ರಾರಂಭದಲ್ಲಿ ಗ್ರಾಮಗಳಿಗೆ ಬರಲು ಮುಂದಾದಾಗ ಗ್ರಾಮಕ್ಕೆ ಬರ ಬೇಡಿ, ಅಲ್ಲೇ ಇರುವುದು ಕ್ಷೇಮ ಎಂದು ಸಂಬಂಧಿಕರು ಸೇರಿದಂತೆ ಗ್ರಾಮಸ್ಥರು ತಡೆಯುತ್ತಿದ್ದರು. ಆದರೆ, ಈಗ ಚುನಾವಣೆಗೆ ಸ್ಪರ್ಧಿಸಿರುವ ಕೆಲ ಅಭ್ಯರ್ಥಿಗಳು ಕರೆ ಮಾಡಿ ಮತ ಹಾಕುವಂತೆ ಒತ್ತಾಯಿಸುತ್ತಿದ್ದಾರೆ. ಕೋವಿಡ್ ಬಗ್ಗೆ ಇದ್ದ ಅಲ್ಪಸ್ವಲ್ಪ ಭಯವೂ ಚುನಾವಣೆ ಯಿಂದಾಗಿ ಮಾಯವಾಗಿದೆ ಎಂದು ಬೆಂಗಳೂರಿನಲ್ಲಿ ಉದ್ಯೋಗಿ, ತಾಲ್ಲೂಕಿನ ಯುವಕ ಅನುಭವ ಹೇಳಿಕೊಂಡರು.