ಮಂಡ್ಯ ತಾಲ್ಲೂಕಿನ ಬೂಕನಕೆರೆ ಪಶು ಆಸ್ಪತ್ರೆ ವೈದ್ಯ ಶಿವಯ್ಯ ಅವರು ಕನಗನಮರಡಿ ಗ್ರಾಮಕ್ಕೆ ಆಗಮಿಸಿದ್ದು, ಬಸ್ ದುರಂತ ನಡೆದ ಸ್ಥಳ ವೀಕ್ಷಣೆಗೆ ತೆರಳಿದ್ದಾರೆ. ಸ್ಥಳ ವೀಕ್ಷಣೆಗೆ ಕಾರು ನಿಲ್ಲಿಸುವ ವೇಳೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಮುಗುಚಿ ಬಿದ್ದಿದೆ. ಕಾರು ಚಾಲಕ, ವೈದ್ಯ ಸೇರಿ ಮೂವರು ಪಾರಾಗಿದ್ದಾರೆ.