<p>ಹಲಗೂರು: ಸಮೀಪದ ಚಿಲ್ಲಾಪುರ ಗ್ರಾಮದಲ್ಲಿರುವ ಸಿದ್ದಪ್ಪಾಜಿ ದೇವಸ್ಥಾನದ ಮೊದಲ ವರ್ಷದ ವಾರ್ಷಿಕೋತ್ಸವ ಮತ್ತು ದೊಡ್ಡಮ್ಮ ತಾಯಿ ಗದ್ದುಗೆಗೆ ರಜತ ಕಲಶ, ಮುಖವಾಡ ಸ್ಥಾಪನೆ ಕಾರ್ಯಕ್ರಮ ಶುಕ್ರವಾರ ಭಕ್ತಿಪೂರ್ವಕವಾಗಿ ನಡೆಯಿತು.</p>.<p>ಶುಕ್ರವಾರ ಬೆಳಿಗ್ಗೆ 9 ಗಂಟೆಯಿಂದ ವೇದ ಪಾರಾಯಣ, ಮಹಾ ಸಂಕಲ್ಪ, ಪುಣ್ಯಾಹ ವಾಚನ, ಮಾತೃಕಾ ಪೂಜೆ, ನವಗ್ರಹಾರಾಧನೆ, ಕಲಶಾರ್ಚನೆ, ಅಗ್ನಿಮುಖ, ಮಹಾ ಗಣಪತಿ ಹೋಮ, ನವಗ್ರಹಾದಿ ಹೋಮ, ವಾಸ್ತು ಶಾಂತಿ, ಪರಿವಾರ, ದೇವತಾ ಹೋಮ ಹವನ ಪೂಜಾ ಕಾರ್ಯಕ್ರಮಗಳು ನಡೆದವು.</p>.<p>ಸಿದ್ದಪ್ಪಾಜಿ ದೇವರ ಹೋಮ, ವಿಶ್ವಕರ್ಮ ಹೋಮ, ದೇವರಿಗೆ ಅಭಿಷೇಕ ಅಲಂಕಾರ, ಜಯಾದಿ, ಪೂರ್ಣಾಹುತಿ, ಕಲಾಶಾಭಿಷೇಕ ಆಲಂಕಾರ, ಮಹಾ ಮಂಗಳಾರತಿ, ಮಂತ್ರ ಪುಷ್ಪ, ಅಷ್ಟಾವಧಾನ, ಶ್ರೀರಾಮ ನವಮಿ ಆಚರಣೆ ನಡೆಯಿತು. ಮಧ್ಯಾಹ್ನ ಭಕ್ತರಿಗೆ ಪ್ರಸಾದ ವಿನಿಯೋಗ ಮತ್ತು ಅನ್ನ ಸಂತರ್ಪಣೆ ನಡೆಯಿತು.</p>.<p>ಸಂಜೆ 5 ಗಂಟೆಗೆ ಚಿಲ್ಲಾಪುರ ಗ್ರಾಮದಲ್ಲಿರುವ ಕಾದಗಟ್ಟಿ ಸ್ಥಳದಿಂದ ಸಿದ್ದಪ್ಪಾಜಿ ದೇವಾಲಯದವರೆಗೆ ನೂರಾರು ಮಹಿಳೆಯರು ಬೆಲ್ಲದ ಅರತಿಯನ್ನು ಮೆರವಣಿಗೆಯಲ್ಲಿ ತಂದು ದೇವರಿಗೆ ಅರತಿ ಬೆಳಗಿ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದರು.</p>.<p>ಹಲಗೂರು, ಚಿಲ್ಲಾಪುರ, ಒದುಬಸಪ್ಪನದೊಡ್ಡಿ, ತೊರೆಕಾಡನಹಳ್ಳಿ, ಮಾರಗೌಡನಹಳ್ಳಿ, ಎನ್.ಕೋಡಿಹಳ್ಳಿ, ಹುಸ್ಕೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.</p>.<p>ವಿಶ್ವಕರ್ಮ ಸೇವಾ ಟ್ರಸ್ಟ್ ಅಧ್ಯಕ್ಷ ಈಶ್ ಕುಮಾರ್, ಕಾರ್ಯದರ್ಶಿ ರಾಮಚಂದ್ರಚಾರ್, ಖಜಾಂಚಿ ಎಚ್.ಕೆ.ಸಿದ್ದಪ್ಪಾಜಿ, ಮುಖಂಡರಾದ ಎಚ್.ಕೆ.ಮೂರ್ತಿ, ಉಮೇಶ್, ಮರಿಯಾಚಾರ್, ಸ್ವಾಮಿ, ಪುಟ್ಟಸ್ವಾಮಿ, ಅಪ್ಪಾಜಾಚಾರ್, ಸಾಗರ್, ಶಿವು, ಪಲ್ಲವಿ, ಅಣ್ಣಯ್ಯ ಸ್ವಾಮಿ, ಶಂಕರ್, ಮರಿಸ್ವಾಮಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260329-40-1115098035</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಲಗೂರು: ಸಮೀಪದ ಚಿಲ್ಲಾಪುರ ಗ್ರಾಮದಲ್ಲಿರುವ ಸಿದ್ದಪ್ಪಾಜಿ ದೇವಸ್ಥಾನದ ಮೊದಲ ವರ್ಷದ ವಾರ್ಷಿಕೋತ್ಸವ ಮತ್ತು ದೊಡ್ಡಮ್ಮ ತಾಯಿ ಗದ್ದುಗೆಗೆ ರಜತ ಕಲಶ, ಮುಖವಾಡ ಸ್ಥಾಪನೆ ಕಾರ್ಯಕ್ರಮ ಶುಕ್ರವಾರ ಭಕ್ತಿಪೂರ್ವಕವಾಗಿ ನಡೆಯಿತು.</p>.<p>ಶುಕ್ರವಾರ ಬೆಳಿಗ್ಗೆ 9 ಗಂಟೆಯಿಂದ ವೇದ ಪಾರಾಯಣ, ಮಹಾ ಸಂಕಲ್ಪ, ಪುಣ್ಯಾಹ ವಾಚನ, ಮಾತೃಕಾ ಪೂಜೆ, ನವಗ್ರಹಾರಾಧನೆ, ಕಲಶಾರ್ಚನೆ, ಅಗ್ನಿಮುಖ, ಮಹಾ ಗಣಪತಿ ಹೋಮ, ನವಗ್ರಹಾದಿ ಹೋಮ, ವಾಸ್ತು ಶಾಂತಿ, ಪರಿವಾರ, ದೇವತಾ ಹೋಮ ಹವನ ಪೂಜಾ ಕಾರ್ಯಕ್ರಮಗಳು ನಡೆದವು.</p>.<p>ಸಿದ್ದಪ್ಪಾಜಿ ದೇವರ ಹೋಮ, ವಿಶ್ವಕರ್ಮ ಹೋಮ, ದೇವರಿಗೆ ಅಭಿಷೇಕ ಅಲಂಕಾರ, ಜಯಾದಿ, ಪೂರ್ಣಾಹುತಿ, ಕಲಾಶಾಭಿಷೇಕ ಆಲಂಕಾರ, ಮಹಾ ಮಂಗಳಾರತಿ, ಮಂತ್ರ ಪುಷ್ಪ, ಅಷ್ಟಾವಧಾನ, ಶ್ರೀರಾಮ ನವಮಿ ಆಚರಣೆ ನಡೆಯಿತು. ಮಧ್ಯಾಹ್ನ ಭಕ್ತರಿಗೆ ಪ್ರಸಾದ ವಿನಿಯೋಗ ಮತ್ತು ಅನ್ನ ಸಂತರ್ಪಣೆ ನಡೆಯಿತು.</p>.<p>ಸಂಜೆ 5 ಗಂಟೆಗೆ ಚಿಲ್ಲಾಪುರ ಗ್ರಾಮದಲ್ಲಿರುವ ಕಾದಗಟ್ಟಿ ಸ್ಥಳದಿಂದ ಸಿದ್ದಪ್ಪಾಜಿ ದೇವಾಲಯದವರೆಗೆ ನೂರಾರು ಮಹಿಳೆಯರು ಬೆಲ್ಲದ ಅರತಿಯನ್ನು ಮೆರವಣಿಗೆಯಲ್ಲಿ ತಂದು ದೇವರಿಗೆ ಅರತಿ ಬೆಳಗಿ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದರು.</p>.<p>ಹಲಗೂರು, ಚಿಲ್ಲಾಪುರ, ಒದುಬಸಪ್ಪನದೊಡ್ಡಿ, ತೊರೆಕಾಡನಹಳ್ಳಿ, ಮಾರಗೌಡನಹಳ್ಳಿ, ಎನ್.ಕೋಡಿಹಳ್ಳಿ, ಹುಸ್ಕೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.</p>.<p>ವಿಶ್ವಕರ್ಮ ಸೇವಾ ಟ್ರಸ್ಟ್ ಅಧ್ಯಕ್ಷ ಈಶ್ ಕುಮಾರ್, ಕಾರ್ಯದರ್ಶಿ ರಾಮಚಂದ್ರಚಾರ್, ಖಜಾಂಚಿ ಎಚ್.ಕೆ.ಸಿದ್ದಪ್ಪಾಜಿ, ಮುಖಂಡರಾದ ಎಚ್.ಕೆ.ಮೂರ್ತಿ, ಉಮೇಶ್, ಮರಿಯಾಚಾರ್, ಸ್ವಾಮಿ, ಪುಟ್ಟಸ್ವಾಮಿ, ಅಪ್ಪಾಜಾಚಾರ್, ಸಾಗರ್, ಶಿವು, ಪಲ್ಲವಿ, ಅಣ್ಣಯ್ಯ ಸ್ವಾಮಿ, ಶಂಕರ್, ಮರಿಸ್ವಾಮಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260329-40-1115098035</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>