ಸೋಂಕು ನಿವಾರಕ ಬೆರಸುವುದರ ಜೊತೆಗೆ ಬಸವರಾಜು ಕೆಲವು ವೇಳೆ ತಾವೇ ಸಿಂಪಡಣೆ ಮಾಡುತ್ತಿದ್ದರು. ವಾರದಿಂದ ಅವರಿಗೆ ತಲೆನೋವು, ಮೈಕೈ ನೋವು ಕಾಣಿಸಿಕೊಂಡಿತ್ತು. ಮಾತ್ರೆ ತೆಗೆದುಕೊಂಡು ಕೆಲಸ ಮುಂದುವರಿಸಿದ್ದರು. ಮಂಗಳವಾರ ಕೆಲಸ ಮಾಡುವಾಗ ಅವರು ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದರು. ಅವರನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ.