‘ಪ್ರವಾಸೋದ್ಯಮ ಇಲಾಖೆಯ ಸಮಿತಿಯಲ್ಲಿ ನಾನೂ ಸದಸ್ಯೆಯಾಗಿದ್ದೇನೆ. ಮಾರ್ಚ್ 20ರಂದು ದೆಹಲಿಯಲ್ಲಿ ಸಮಿತಿಯ ಸಭೆ ನಡೆಯಿತು. ಸಭೆಯಲ್ಲಿ ಬಿಜೆಪಿ ನಾಯಕಿ ವಸುಂಧರಾ ರಾಜೇ ಅರಸ್ ಪುತ್ರ ದುಶ್ಯಂತ್ ಸಿಂಗ್ ಭಾಗವಹಿಸಿದ್ದರು. ಅವರು ಗಾಯಕಿ, ಕೋವಿಡ್– 19 ದೃಢಪಟ್ಟಿದ್ದ ಕನ್ನಿಕಾ ಕಪೂರ್ ಪಾರ್ಟಿಗೂ ಹೋಗಿ ಬಂದಿರುವ ವಿಷಯ ಬೆಳಕಿಗೆ ಬಂತು. ಹೀಗಾಗಿ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲರಿರೂ ಕ್ವಾರಂಟೈನ್ನಲ್ಲಿ ಇರುವಂತೆ ಅಧಿಕಾರಿಗಳು ಸೂಚನೆ ನೀಡಿದ್ದರು’ ಎಂದರು.