ಆಲೂರು ಪಟ್ಟಣದಲ್ಲಿ ಕೊರೊನಾ ಜಾಗೃತಿ ಸಭೆ ಬಳಿಕ ಮತನಾಡಿದ ಅವರು, ಇತ್ತೀಚೆಗೆ ಜಿಲ್ಲಾ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ಮೂರು ದಿನ ಲಾಕ್ಡೌನ್ ಮಾಡಲು ಒಪ್ಪಿದ ಜಿಲ್ಲಾ ಉಸ್ತುವಾರಿ ಸಚಿವರು, ಕೆಲ ಗಂಟೆ ನಂತರ ವಾಪಾಸು ಪಡೆದ ಕಾರಣ ಗೊತ್ತಾಗಲಿಲ್ಲ. ಕೊರೊನಾ ಪ್ರಕರಣದಲ್ಲಿ ಹಾಸನ ಜಿಲ್ಲೆ, ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ಗ್ರಾಮೀಣ ಪ್ರದೇಶದಲ್ಲಿರುವ ಸೋಂಕಿತರನ್ನು ಹೋಂಐಸೋಲೇಶನ್ ಮಾಡಿರುವುದು ಮಾರಕವಾಗಿದೆ. ಪ್ರತಿ ತಾಲ್ಲೂಕಿನಲ್ಲಿ ಮೊರಾರ್ಜಿ ಶಾಲೆ, ಹಾಸ್ಟೆಲ್ಗಳನ್ನು ಬಳಸಿಕೊಂಡು ಕೋವಿಡ್ ಕೇರ್ ಕೇಂದ್ರ ಮಾಡ ಬೇಕಿತ್ತು. ಕೊರೊನಾ ಹರಡುವಿಕೆ ತಡೆಯು ವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದರು.