ತಡೆ ಒಡೆಯುವುದು, ಕಟ್ಟೆ ಒಡೆಯುವುದು, ಮೊಟ್ಟೆ ಒಡೆಯು ವುದೂ ಸೇರಿದಂತೆ ಸಾಂಪ್ರದಾಯಿಕ ಆಚರಣೆಗಳು ವಾಡಿಕೆಯಂತೆ ನಡೆದವು. ಹಣ್ಣು, ಕಾಯಿ, ಹೂ, ಮೊಟ್ಟೆ ಮಾರುವ ಸ್ಥಳೀಯ ಮತ್ತು ಹೊರ ಊರಿನ ವ್ಯಾಪಾರಿಗಳು ದೇವಾಲಯ ಹಿಂದೆ ಮತ್ತು ಮುಂದೆ ನಿಂತು ವಹಿವಾಟು ನಡೆಸಿದರು. ದೇವಾಲಯದ ಹಿಂದಿನ ತೋಟದ ಮನೆಗಳಲ್ಲಿ ಕೆಲವರು ಬಾಡೂಟದ ಪರಿಷೆಯನ್ನೂ ನಡೆಸಿದರು. ಬೆಳಿಗ್ಗೆ 10 ಗಂಟೆ ವೇಳೆಗೆ ದೇವಾಲಯದ ಆಸುಪಾಸಿನಲ್ಲಿ ಭಕ್ತರ ದಂಡೇ ಕಂಡುಬಂತು. ಕಡತನಾಳು– ಕ್ಯಾತನಹಳ್ಳಿ ಮಾರ್ಗದಲ್ಲಿ ಜನ ಮತ್ತು ವಾಹನ ದಟ್ಟಣೆ ಉಂಟಾಗಿತ್ತು.