ಪ್ರತಿದಿನ ಒಂದೊಂದು ತಾಲ್ಲೂಕಿಗೆ ತೆರಳುವ ಉಪ ನಿರ್ದೇಶಕ ರಂಗೇಗೌಡ ಅವರು ಸ್ಥಳೀಯ ಶಾಸಕರು, ಜನಪ್ರತಿನಿಧಿಗಳನ್ನು ಆಹ್ವಾನಿಸಿ ಕಿಟ್ ವಿತರಿಸುತ್ತಿದ್ದಾರೆ. ಮಳವಳ್ಳಿ ತಾಲ್ಲೂಕಿನ ಕಾಡಂಜಿನಲ್ಲಿ ವಾಸಿಸುವ ಕುಟುಂಬ ಸದಸ್ಯರು, ನಾಗಮಂಗಲ ತಾಲ್ಲೂಕಿನ ಬುಡಬುಡಕೆ ಕಾಲೊನಿಯಲ್ಲಿ ವಾಸಿಸುವ 30 ಕುಟುಂಬ, ಶಿಳ್ಳೇಕ್ಯಾತ ಸಮುದಾಯದ ಜನರು, ಕದಬಹಳ್ಳಿಯ ಕೊರಮರು, ಕೋಡಿಹಳ್ಳಿ ಗ್ರಾಮದ ಸುಡುಗಾಡು ಸಿದ್ಧರ ಕುಟುಂಬಗಳಿಗೆ ಸಹಾಯ ಮಾಡಲಾಗಿದೆ.