ಹಾರ್ಟ್ ಬರ್ನಿಂಗ್: ‘ರಾಜ್ಯ ಸರ್ಕಾರದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ಬಹಳ ಮಂದಿ ಇದ್ದರು. ಸ್ಥಾನ ಸಿಗದವರಿಗೆ ಕೆಲ ಕಾಲ ಹಾರ್ಟ್ ಬರ್ನಿಂಗ್ (ಹೃದಯ ಸುಡಬಹುದು) ಆಗಬಹುದು, ಮುಂದೆ ಎಲ್ಲವೂ ಸರಿ ಹೋಗುತ್ತದೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ರಾಜ್ಯದೆಲ್ಲೆಡೆ ಪ್ರವಾಸ ಮಾಡಿ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಜೆಡಿಎಸ್ನ ಶಾಸಕರು ಬಿಜೆಪಿ ಸೇರಬಹುದು, ಸಿ.ಎಸ್.ಪುಟ್ಟರಾಜು ಸೇರಿ ಯಾರೇ ಬಂದರೂ ಸ್ವಾಗತ ಮಾಡುತ್ತೇವೆ’ ಎಂದರು.